"ಮಲೆನಾಡಿನ ಶರಾವತಿ ಸೊಬಗಿನ ಸಿಂಧೂರ - ಈ ಐತಿಹಾಸಿಕ ಸಿಗಂದೂರು ಸೇತುವೆ"
ಸಾಗರ ತಾಲ್ಲೂಕು ಕಳಸವಳ್ಳಿ - ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಐತಿಹಾಸಿಕ ಕೇಬಲ್ ಆಧಾರಿತ ಸಿಗಂದೂರು ಸೇತುವೆ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳ್ಳಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಸೇತುವೆ ಪರಿವೀಕ್ಷಣೆ ನಡೆಸಲಾಯಿತು.
ಇದಕ್ಕೂ ಮುನ್ನ ನಾಡಿನ ಇತಿಹಾಸ ಪ್ರಸಿದ್ಧ ಶಕ್ತಿ ಕೇಂದ್ರಗಳಲ್ಲಿ ಒಂದಾದ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಾನಕ್ಕೆ ಪಕ್ಷದ ಪ್ರಮುಖರೊಂದಿಗೆ ಭೇಟಿ ನೀಡಿ ಯಾವುದೇ ಅಡೆತಡೆಗಳಿಲ್ಲದೆ ನಿರ್ವಿಘ್ನವಾಗಿ ಸಾಗಲು ಶಕ್ತಿ ನೀಡಿದ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ಮಲೆನಾಡ ಹಚ್ಚ ಹಸಿರಿನ ರಾಜಧಾನಿ ಶಿವಮೊಗ್ಗ ಜಿಲ್ಲೆ ಹಲವಾರು ವಿಶೇಷತೆಗಳಿಂದ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು - ಕಳಸವಳ್ಳಿ ನಡುವೆ ಸಾಗುವ ಹಾದಿಗೆ ನಿರ್ಮಾಣ ಮಾಡಿರುವ ಈ ಸಿಗಂದೂರು ಸೇತುವೆ ಒಂದು ಹೊಸ ಮೈಲಿಗಲ್ಲು ಎಂದು ದಾಖಲೆ ಬರೆದಿದೆ.
ನವನವೀನ ತಂತ್ರಜ್ಞಾನ ಹಾಗೂ ಆಧುನಿಕ ತಾಂತ್ರಿಕ ವ್ಯವಸ್ಥೆಯಿಂದ ಅತ್ಯಂತ ಅಚ್ಚುಕಟ್ಟಾಗಿ ಸುಮಾರು 430.00 ಕೋಟಿ ಅನುದಾನದಲ್ಲಿ ರಾಜ್ಯದ ಅತಿ ಉದ್ದದ 2.25 ಕಿ.ಮೀ ಕೇಬಲ್ ಆಧಾರಿತ ಸೇತುವೆ ಕಾಮಗಾರಿ ಸಾರ್ವಜನಿಕ ಸೇವೆಗೆ ಅಡಿ ಇಡಲು ಸಜ್ಜಾಗಿದೆ.
ಮತ್ತೊಮ್ಮೆ ಐತಿಹಾಸಿಕ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದವರಲ್ಲಿ ಮೊದಲಿಗರಾದ ಪೂಜ್ಯ ತಂದೆಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸುತ್ತಾ, ಇದೇ ಸಂದರ್ಭದಲ್ಲಿ ಈ ಯೋಜನೆಗೆ ಸೂಕ್ತ ಅನುದಾನ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರಿಗೆ ಹಾಗೂ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಈ ಸಂದರ್ಭದಲ್ಲಿ ಅನಂತ ಅನಂತ ಧನ್ಯವಾದ ಅರ್ಪಿಸುತ್ತೇನೆ.
ಈ ಒಂದು ಇತಿಹಾಸ ಪುಟಗಳಲ್ಲಿ ದಾಖಲಾಗುವಂತ ಐತಿಹಾಸಿಕ ಸೇತುವೆ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮೆರುಗು ದೊರೆಯುತ್ತದೆ. ಜೊತೆಗೆ ವ್ಯಾವಹಾರಿಕವಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ. ಈ ಮೂಲಕ ಹೊಸ ರೀತಿಯ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುತ್ತದೆ ಎಂಬ ವಿಶ್ವಾಸ ಬಲವಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು, ಹಿರಿಯ
ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಅವರು, ಮಾಜಿ ಶಾಸಕರಾದ ಶ್ರೀ ಹರತಾಳು ಹಾಲಪ್ಪ ಅವರು, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ಎಂಎಡಿಬಿ ಮಾಜಿ ಅಧ್ಯಕ್ಷರಾದ ಶ್ರೀ ಗುರುಮೂರ್ತಿ ಅವರು, ಮುಖಂಡರಾದ ಶ್ರೀ ಮೇಘರಾಜ್ ಅವರು ಸೇರಿದಂತೆ ಅನೇಕ ಪಕ್ಷದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿರಿ ಎಂದು ಹೇಳಿದ ಶಾಸಕರಾದ ಜಿ.ಹೆಚ್. ಶ್ರೀನಿವಾಸ್
ತರೀಕೆರೆ ತಾಲ್ಲೂಕು ನಂದಿಬಟ್ಟಲು ಮುರಾರ್ಜಿ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ ಜಿ. ಹೆಚ್. ಶ್ರೀನಿವಾಸ್ .. ತರೀಕೆರೆ ತಾಲೂಕಿನ ನಂದಿಬಟ್ಟಲು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರಾದ ಬಸವರಾಜ್ ತೆಗ್ಗಿ ಮತ್ತು ಶಿಕ್ಷಕರಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆಂದು ಹೇಳಿದರು. ವಾರ್ಡನ್ ಸತೀಶ್ ರವರೊಂದಿಗೆ ಮಾತನಾಡುತ್ತಾ ಮಕ್ಕಳಿಗೆ ಆಹಾರದ ಮೆನು ರೀತಿ ಉತ್ತಮವಾದ ಊಟ ತಿಂಡಿ ನೀಡಬೇಕು ಜೊತೆಗೆ ಮೊಟ್ಟೆ ಹಾಗೂ ಹಾಲು ಮತ್ತು ಚಿಕನ್ ಸಾರು ರುಚಿಕರವಾಗಿರಬೇಕು ಎಂದು ಹೇಳಿದರು. ಊಟದಲ್ಲಿ ವ್ಯತ್ಯಾಸವಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು. ಬಾಲಕರ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದು ಕೊರತೆಗಳ ಬಗ್ಗೆ ಚರ್ಚೆ ಮಾಡಿ ಶೌಚಾಲಯ ಸ್ವಚ್ಛತೆ ಬಗ್ಗೆ ವೀಕ್ಷಿಸಿ ಶಾಲಾ ವಾತಾವರಣ ತುಂಬಾ ಚೆನ್ನಾಗಿದೆ ಇದನ್ನೇ ಮುಂದುವರಿಸಿರಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಉಪಸ್ಥಿತರಿದ್ದು ಶಾಲೆಯ ಮುಂಬಾಗದಲ್ಲಿರುವ ಎರಡು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಮಾಡಲು ಶಾಸಕರಿಗೆ ಮನವಿ ಮಾಡಿದರು. ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಲಿಂಗದಳ್ಳಿಯ ರವಿ ರವರು ಮಾತನಾಡುತ್ತಾ ಕಲ್ಲತ್ತಿಗಿರಿಯಿಂದ ಕುಡಿಯುವ ನೀರಿಗೆ ಸಂಪರ್ಕವನ್ನು ಶಾಲೆಗೆ ಒದಗಿಸಿ ನೀರಿನ ಸಮಸ್ಯೆ ಬಗೆಹರಿಸಲು ತಿಳಿಸಿದರು. ಪ್ರಾಂಶುಪಾಲರಾದ ಬಸವರಾಜ್ ತೆಗ್ಗಿ ರವರು ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು ಮಾಡಿಸಿಕೊಳ್ಳಲು ಶಾಸಕರಲ್ಲಿ ವಿನಂತಿಸಿದರು.
ಕಡೂರಿನ ಅನಕ್ಷರಸ್ಥ ಮಹಿಳೆಗೆ ನ್ಯಾಯ ಕೊಡಿಸಿದ ಮಹಿಳಾ ಅಧ್ಯಕ್ಷರಾದ ಶ್ರೀಮತಿ ರಜಿನಿರಾಜ್
ದಿನಾಂಕ 2.7.2025 ರಂದು ಚಿಕ್ಕಮಂಗಳೂರು ಜಿಲ್ಲೆ ಕಡೂರು ತಾಲೂಕಿನ ಅನಕ್ಷರಸ್ಥ ಮಹಿಳೆಗೆ
ನಿವೇಶನದ ಆಸೆಯಿಂದ ಒಬ್ಬ ಮಹಿಳೆಯನ್ನು ನಂಬಿ, ರೂ-32 ಲಕ್ಷ ಹಣವನ್ನು ಕೊಟ್ಟು ಮೋಸ ಹೋಗಿದ್ದಾರೆ.
ಒಂದು ತಿಂಗಳ ಹಿಂದೆ ಅನ್ಯಾಯಕ್ಕೆ ಒಳಗಾದ ಮಹಿಳೆ ತನಗೆ ಆಗಿರೋದು ಅನ್ಯಾಯದ ಬಗ್ಗೆ ಮಹಿಳಾ ಮತ್ತು
ಮಕ್ಕಳ ಅಧ್ಯಕ್ಷರಾದ ಶ್ರೀಮತಿ ರಜನಿರಾಜ್ ಮಂಡ್ಯ,ಇವರಲ್ಲಿ ಬಂದು ದೂರನ್ನು ದಾಖಲಿಸಿದರು, ನನಗೆ
ನ್ಯಾಯವನ್ನು ಕೊಡಿಸಿ , ನಾನು ನಿವೇಶನದ ಆಸೆಯಿಂದ 32 ಲಕ್ಷ ಹಣವನ್ನು ಕೊಟ್ಟು ಕಳೆದುಕೊಂಡಿದ್ದೇನೆ
ಎಂದು ಹೇಳಿ ದೂರನ್ನು ದಾಖಲಿಸಿ ಹೋಗಿದ್ದರು. ಇದರ ಬಗ್ಗೆ ವಿಶೇಷವಾಗಿ ವಿಚಾರಣೆ ಮಾಡಲು ಮಹಿಳಾ
ಅಧ್ಯಕ್ಷರಾದ ಶ್ರೀಮತಿ ರಜಿನಿರಾಜ್ ಚಿಕ್ಕಮಗಳೂರು ಜಿಲ್ಲೆಗೆ ಎರಡು ಬಾರಿ ಬೇಟಿ ಕೊಟ್ಟು, ಕುಟುಂಬದವರನ್ನು
ಕರೆಸಿ ಆಪ್ತ ಸಮಾಲೋಚನೆ ಮೂಲಕ ಸಮಸ್ಯೆ ಬಗೆಹರಿಸಲಾಯಿತು.10.09.2025 ರಂದು ರೂ 32-ಲಕ್ಷ ಹಣವನ್ನು
ಕೊಡುವುದಾಗಿ ಒಪ್ಪಿಕೊಂಡಿದ್ದು.ಕಾನೂನಿನ ದಾಖಲಾತಿಗಳನ್ನು ಭದ್ರತೆಯ, ದೃಷ್ಟಿಯಿಂದ ನೀಡಿರುತಾರೆ.
ಪರ್ಸನಲ್ ಚೆಕ್ಕು ,ಪ್ರೊನೌಟ್ , ಇ-ಸ್ಟ್ಯಾಂಪ್ ಪೇಪರನ್ನು ಸ್ವ ಇಚ್ಛೆಯಿಂದ ನೀಡಿರುತ್ತಾರೆ.ನೊಂದ ಮಹಿಳೆಗೆ,ನ್ಯಾಯ
ಕೊಡಿಸುವಲ್ಲಿ, ಮಹಿಳಾ ಅಧ್ಯಕ್ಷರಾದ ಶ್ರೀಮತಿ ರಜಿನಿರಾಜ್ ರವರು, ಅವರ ಜೊತೆಗೆ ಶ್ರೀಮತಿ ರಶ್ಮಿ ಕೂಡ ಹಾಜರಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯಶಸ್ವಿಯಾಗಿದ್ದಾರೆ.
ಭಾರತೀಯ ಕ್ರಿಶ್ಚಿಯನ್ ದಿನ ಆಚರಣೆಯ ಅಂಗವಾಗಿ ರಕ್ತದಾನ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ
ತರೀಕೆರೆ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾರತಿಯ ಕ್ರಿಶ್ಚಿಯನ್ ದಿನ ಆಚರಿಸಲಾಯಿತು
ಭಾರತೀಯ ಕ್ರಿಶ್ಚಿಯನ್ ದಿನ ಆಚರಣೆಯ ಅಂಗವಾಗಿ ಯುನೈಟಿಡ್ ಕ್ರಿಶ್ಚಿಯನ್ ಫೆಲೋಶಿಪ್ (ರಿ) ತರೀಕೆರೆ
ಇವರ ವತಿಯಿಂದ ರಕ್ತ ದಾನ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು
ಹೋಲಿ ಕ್ರಾಸ್ ಆಸ್ಪತ್ರೆಯವರ ಸಹಯೋಗದೊಂದಿಗೆ ಮಾಡಲಾಯಿತು ,
ಈ ಸಂದರ್ಭದಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದ ಎಲ್ಲಾ ಚರ್ಚ್ ಗಳ.ಫಾದರ್ ವೀಲಿಯಂ.ಪೇರೆರಾ , ಫಾದರ್
. ಜೀಜಿ ಅಟೋಣಿ , ಫಾದರ್ ಮಂಜಪ್ಪ.ಫಾದರ್ ಕೃಪಾಕರ ನ್. ಫಾದರ್ ಪೌಲೋಸ್ .ಬ್ರ ಸೆಲ್ವಿನ್
ಮತ್ತು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ.ಟಿ.ಎನ್ ಜಗದೀಶ* ರವರು, *ಟಿ.ಎಸ್ ದೇವರಾಜ್
ಪುಷ್ಪರಾಜ್.ಇವರು ಭಾಗವಹಿಸಿದರು
ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್ ಅವರಿಂದ 2025 ರ ದಸರಾ ಉದ್ಘಾಟನೆ ಮಾಡಲು
ಸರ್ಕಾರಕ್ಕೆ ತೇಜಸ್ವಿ ಮನವಿ
2025 ರ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಯನ್ನು ಬೂಕರ್ ಪ್ರಶಸ್ತಿ
ಪಡೆದ ಕನ್ನಡದ ಮೊದಲ ಸಾಹಿತಿ " ಬಾನು ಮುಷ್ತಾಕ್ " ಅವರಿಂದ ಮಾಡಿಸ ಬೇಕೆಂದು ಕನ್ನಡ
ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ,
ಕನ್ನಡ ದ ಪ್ರಮುಖ ಲೇಖಕಿ ಎಸ್, ಕೆ, ಬಾನು ಮುಷ್ತಾಕ್ ಅವರ 'ಹಾರ್ಟ ಲ್ಯಾಂಪ್ ' ಕೃತಿಗೆ ವಿಶ್ವದ
ಮೇರು ಸಾಹಿತ್ಯ ಪ್ರಶಸ್ತಿಯಾದ 2025 ನೇ ಸಾಲಿನ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಒಲಿದಿದೆ,
ಲಂಡನ್ ನಲ್ಲಿ 2025 ಮೇ 20 ರಂದು ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು,
ಕೃತಿಯ ಅನುವಾದಕರಾದ ದೀಪ ಭಸ್ತಿ ಅವರೊಂದಿಗೆ ಬಾನು ಮುಷ್ತಾಕ್ ಅವರು ಈ ಪ್ರಶಸ್ತಿಯನ್ನು
ಸ್ವೀಕರಿಸಿದ್ದರು,
ಬಾನು ಅವರು ' ಎದೆಯ ಹಣತೆ ' ಶೀರ್ಷಿಕೆಯಡಿ ಬರೆದಿದ್ದ ಈ ಕೃತಿಯನ್ನು ದೀಪಾ ಭಸ್ತಿಯವರು
ಹಾರ್ಟ್ ಲ್ಯಾಂಪ್ ' ಹೆಸರಿನಲ್ಲಿ ಅನುವಾದಿಸಿದ್ದಾರೆ,
ಬೂಕರ್ ಪ್ರಶಸ್ತಿಯು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಗೆಲುವು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ
ನಾಗಲಿಂಗ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ,
ಬಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ
2025 ರ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಯನ್ನು ಬೂಕರ್ ಪ್ರಶಸ್ತಿ ಪಡೆದ
ಮೊದಲ ಕನ್ನಡ ಸಾಹಿತಿ ಬಾನು ಮುಷ್ತಾಕ್ ಅವರಿಂದ ಉದ್ಘಾಟನೆ ಮಾಡಿಸುವ ಮೂಲಕ ಗೌರವ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ತೇಜಸ್ವಿ ಮನವಿ ಮಾಡಿದ್ದಾರೆ,
ಹೊಳೆಬಾಗಿಲು ಲಾಂಚ್ ಸ್ಟೇರಿಂಗ್ ಜಾಮ್ ಆಗಿ ತಪ್ಪಿದ ಅನಾಹುತ
ದಿನಾಂಕ/03/07./2025ರಂದು ಹೊಳೆಬಾಗಿಲು ಲಾಂಚನ ಸ್ಟೇರಿಂಗ್ ಜಾಮ್ ಆಗಿ ಕೆಲ ಹೊತ್ತು
ಭಯದ ವಾತಾವರಣ ಸೃಷ್ಟಿಯಾಯಿತು. ಲಾಂಚಿನಲ್ಲಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ
ಲಾಂಚಿನಲ್ಲಿ ಒಮ್ಮೆಲೇ ಆದ ಈ ಅವಘಡಕ್ಕೆ ಎಲ್ಲರ ಎದೆಯಾಳದಲ್ಲಿ ಏರಿಳಿತ ಕಂಡುಬಂದರೂ
ಹತ್ತಿರದಲ್ಲೇ ಇದ್ದ ದಿಲೀಪ್ ಬಿಲ್ಡರ್ಸ್ ಬೋಟಿನಿಂದ ಲಾಂಚನ್ನು ದಡಸೇರಿಸಲಾಗಿದೆ.
ಹೊಳೆಬಾಗಿಲು ಲಾಂಚಿನಿಂದ ತಿಂಗಳಿಗೆ ಸುಮಾರು ನಲವತ್ತು ಲಕ್ಷಕ್ಕೂ ಅಧಿಕ ವರಮಾನ
ಜಲಾನಯನ ಇಲಾಖೆಗೆ ಬರುತ್ತಿದ್ದರೂ ಇವುಗಳ ದುರಸ್ಥಿ ಹಾಗೂ ಸರಿಯಾದ ನಿರ್ವಹಣೆ ಇಲ್ಲದಿರುವುದೇ
ಇದಕ್ಕೆಲ್ಲ ಕಾರಣ ಎಂದು ಜನರು ಮಾತನಾಡುತ್ತಿದ್ದಾರೆ.
ಇಂದು ಹಾಳಾದ ಲಾಂಚಿನ ಸ್ಟೇರಿಂಗ್ ಹಾಳಾಗಿ ಒಂದು ವಾರ ಕಳೆಯುತ್ತಾ ಬಂದರೂ ಸರಿಯಾದ ರಿಪೇರಿ ಕಾರ್ಯ ಮಾಡಿರುವುದಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ.ಈ ಲಾಂಚುಗಳಲ್ಲಿ ಅರೆಲಾಲಿಕ ನೌಕರರೇ ಹೆಚ್ಚು
ಇದ್ದು ಅವರ ವೇತನ ಪಾವತಿಯಾಗದೆ ಸುಮಾರು ಆರು ತಿಂಗಳ ವೇತನ ಬಾಕಿ ಇದ್ದು ಸಂಬಳ ಇಲ್ಲದೆ ದುಡಿಯುವವರ ಆಲಸ್ಯವೂ ಇದಕ್ಕೆ ಇನ್ನೊಂದು ಕಾರಣವಾಗಿರಬಹುದು.
ಈ ಹಿಂದೆಯೂ ಈ ನೌಕರರ ವೇತನ ಬಾಕಿ ಇದ್ದಾಗ,ಹಿಂದಿನ ಅವದಿಯ ಶಾಸಕರಾದ ಹರತಾಳು
ಹಾಲಪ್ಪನವರು ಎರಡೇ ದಿನದಲ್ಲಿ ವೇತನ ಪಾವತಿ ಮಾಡಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪರಮೇಶ್ವರ, ಕರೂರು.ತುಮರಿ.
ದಿನಾಂಕ 06.06.2025 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ರವರ ಅಧ್ಯಕ್ಷತೆಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಕಾಯಿದೆ ಸೆಕ್ಷನ್ -4 ಹಾಗೂ ಪರಿಭಾವಿತ ಅರಣ್ಯ
ಅಧಿಸೂಚನೆಗೆ ಸಂಬಂಧಿಸಿದ ಸಭೆಯಲ್ಲಿ* ಪಾಲ್ಗೊಂಡು, ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ
ಈ ಕೆಳಕಂಡ ವಿಚಾರಗಳ ಚರ್ಚಿಸಲಾಯಿತು.
ವಿಧಾನಸಭಾ
ದಿನಾಂಕ 06.06.2025 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ರವರ ಅಧ್ಯಕ್ಷತೆಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಕಾಯಿದೆ ಸೆಕ್ಷನ್ -4 ಹಾಗೂ ಪರಿಭಾವಿತ ಅರಣ್ಯ
ಅಧಿಸೂಚನೆಗೆ ಸಂಬಂಧಿಸಿದ ಸಭೆಯಲ್ಲಿ* ಪಾಲ್ಗೊಂಡು, ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ
ಈ ಕೆಳಕಂಡ ವಿಚಾರಗಳ ಚರ್ಚಿಸಲಾಯಿತು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತರೀಕೆರೆ ತಾಲ್ಲೂಕು, ಲಕ್ಕವಳ್ಳಿ ಹೋಬಳಿ, ರಂಗೇನಹಳ್ಳಿ ಗ್ರಾಮದ ಸರ್ವೆ
ನಂ. 4 ರಲ್ಲಿ ಈ ಹಿಂದೆ 1957ರಲ್ಲಿ ಭದ್ರಾ ಪುನರ್ವಸತಿ ಸಂತ್ರಸ್ಥರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಮಾಜಿ ಸೈನಿಕರುಗಳಿಗೆ ನ್ಯಾಯಾಲಯದ ಆದೇಶದ ಮೇರೆಗೆ ಹಾಗೂ ಬಗರ್ಹುಕುಂ ಸಕ್ರಮೀಕರಣ ಅರ್ಜಿಗಳಾದ 50 & 53 ರಲ್ಲಿ ವಿವಿಧ ರೈತರುಗಳಿಗೆ ಜಮೀನುಗಳನ್ನು ಮಂಜೂರಾತಿ ಮಾಡಲಾಗಿದ್ದು, ಪ್ರಸ್ತುತ ಸದರಿ ಭೂಮಿಯನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ ಎಂದು ಅನಗತ್ಯವಾಗಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಬಗ್ಗೆ.
ತರೀಕೆರೆ ತಾಲ್ಲೂಕು, ಲಕ್ಕವಳ್ಳಿ ಹೋಬಳಿ, ಗೋಪಾಲ ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಭೂಮಿಯನ್ನು ಮಂಜೂರಾತಿ ಮಾಡಿರುವ ಪ್ರಕರಣದ ಬಗ್ಗೆ.
ತರೀಕೆರೆ ತಾಲ್ಲೂಕು, ಲಿಂಗದಹಳ್ಳಿ ಹೋಬಳಿ ವ್ಯಾಪ್ತಿಯ ಹೊಸಗಂಗೂರು & ಹಳೇಗಂಗೂರು ಗ್ರಾಮ
ಸೇರಿದಂತೆ ಇತರೆ ಜನವಸತಿ ಪ್ರದೇಶಗಳನ್ನು ಅರಣ್ಯ ಎಂದು ಪಹಣಿ ಪತ್ರಿಕೆಯಲ್ಲಿ ಇಂಡೀಕರಣ ಮಾಡಿರುವುದನ್ನು ರದ್ದುಪಡಿಸುವ ಬಗ್ಗೆ,
ಮೇಲ್ಕಂಡ ವಿಷಯಗಳ ಜೊತೆಗೆ ತರೀಕೆರೆ & ಅಜ್ಜಂಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ನಮೂನೆ 50 & 53 ರಲ್ಲಿ ಹಾಗೂ ವಿಶೇಷ ಪ್ರಕರಣಗಳಲ್ಲಿ ಜಮೀನುಗಳು ಮಂಜೂರಾಗಿ ಕಂದಾಯ ದಾಖಲಾತಿಗಳನ್ನು ಹೊಂದಿ ಅನೇಕ ವರ್ಷಗಳಿಂದ ಸ್ವಾಧೀನಾನುಭವದಲ್ಲಿರುವ ರೈತರನ್ನು ಒಕ್ಕಲೆಬ್ಬಿಸದಿರುವಂತೆ ಸಭೆಯ ಗಮನ ಸೆಳೆಯಲಾಯಿತು.
ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ತರೀಕೆರೆ ತಾಲ್ಲೂಕು ವ್ಯಾಪ್ತಿಯ ಮಲ್ಲಿಗೇನಹಳ್ಳಿ, ಸಿದ್ದಾಪುರ, ಗುರುಪುರ, ಸೈದುಖಾನ್, ಬಾವಿಕೆರೆ, ದೊಡ್ಡಕುಂದೂರು, ಜಂಬದಹಳ್ಳ, ಗಣೇಶಪುರ, ತ್ಯಾಗದಬಾಗಿ ಇತ್ಯಾದಿ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ/ಉಪ ಗ್ರಾಮಗಳನ್ನಾಗಿ ರಚಿಸುವ ಸಲುವಾಗಿ ಆ ಜಮೀನುಗಳ ಬದಲಿಗೆ ಇತರೆ ಕಂದಾಯ ಭೂಮಿಯನ್ನು ಪಡೆದು ಅಂತಹ ಪ್ರದೇಶಗಳನ್ನು ಕಂದಾಯ/ಉಪ ಗ್ರಾಮಗಳನ್ನಾಗಿ ರಚಿಸಲು ಅನುಮತಿ ನೀಡುವಂತೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಈ ಮೇಲ್ಕಂಡ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿ ರೈತರುಗಳಿಗೆ ಈಗಾಗಲೇ ಮಂಜೂರಾಗಿ ಕಂದಾಯ ದಾಖಲೆಗಳನ್ನು ಹೊಂದಿರುವ ಜಮೀನುಗಳನ್ನು ಹಾಗೆಯೇ ಉಳಿಸಿಕೊಡುವ ನಿಟ್ಟಿನಲ್ಲಿ ಸದರಿ ಜಮೀನುಗಳ ಬದಲಿಗೆ ಅರಣ್ಯ ಸ್ವರೂಪ ಹೊಂದಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸೂಕ್ತ ಪ್ರಸ್ತಾವನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಯಿತು.
ಭದ್ರಾ & ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಹಾಗೂ ನಮೂನೆ 50 & 53 ರಲ್ಲಿ ಮತ್ತು ವಿಶೇಷ ಪ್ರಕರಣಗಳಲ್ಲಿ ಭೂ ಮಂಜೂರಾತಿ ಪಡೆದು ಕಂದಾಯ ದಾಖಲೆಗಳನ್ನು ಹೊಂದಿ ಹಲವಾರು ವರ್ಷಗಳಿಂದ ಸ್ವಾಧೀನಾನುಭವದಲ್ಲಿರುವ ರೈತರ ಹಿತ ಕಾಪಾಡುವ ಬಗ್ಗೆ *ಸಕಾರಾತ್ಮಕವಾಗಿ ಸ್ಪಂಧಿಸಿದ ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರಖಂಡ್ರೆ ರವರಿಗೆ ನನ್ನ ವಿಧಾನಸಭಾ ಕ್ಷೇತ್ರದ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.*
ಈ ಸಭೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ಡಿ ತಮ್ಮಯ್ಯ ರವರು, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ. ರಾಜೇಗೌಡ ರವರು, ಕಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ. ಎಸ್. ಆನಂದ್ ರವರು, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿಯಾದ ಶ್ರೀಮತಿ ನಯನ ಮೋಟಮ್ಮರವರು ಹಾಗೂ ಅರಣ್ಯ ಪಡೆಯ ಮುಖ್ಯಸ್ಥರಾದ ಶ್ರೀಮತಿ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಶ್ರೀ ಸುಭಾಷ್ ಮಾಲ್ಕಡೆ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಶ್ರೀಮತಿ ಮೀನಾ ನಾಗರಾಜ್ ರವರು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರ
ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ನಿಂದ ಸುಟ್ಟು ತಲೆಮರೆಸಿಕೊಂಡಿದ್ದ 03 ಜನ ಕೊಲೆ ಆರೋಪಿಗಳ ಬಂಧನ
ದಿನಾಂಕ:02-06-2025 ರಂದು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಸಾಗರ ಗೇಟ್ ಬಳಿ ಯಾವುದೋ ಅನಾಮಧೇಯ ವ್ಯಕ್ತಿಯ ದೇಹವು ಸುಟ್ಟ ಸ್ಥಿತಿಯಲ್ಲಿರುವುದಾಗಿ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಸದರಿ ಮೃತ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿ ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್
ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ನಿಂದ ಸುಟ್ಟು ತಲೆಮರೆಸಿಕೊಂಡಿದ್ದ 03 ಜನ ಕೊಲೆ ಆರೋಪಿಗಳ ಬಂಧನ
ದಿನಾಂಕ:02-06-2025 ರಂದು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಸಾಗರ ಗೇಟ್ ಬಳಿ ಯಾವುದೋ ಅನಾಮಧೇಯ ವ್ಯಕ್ತಿಯ ದೇಹವು ಸುಟ್ಟ ಸ್ಥಿತಿಯಲ್ಲಿರುವುದಾಗಿ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಸದರಿ ಮೃತ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿ ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟು ಹಾಕಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿರುವುದು ಕಂಡು ಬಂದ ಮೇರೆಗೆ ಫಿರ್ಯಾದುದಾರರಾದ ಶ್ರೀ ಹೆಚ್ ಶ್ರೀನಿವಾಸ್ ರವರು ನೀಡಿದ ದೂರನ್ನು ಸ್ವೀಕರಿಸಿ ಕಡೂರು ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ನಂ 159/2025 ಕಲಂ 103(1), 238 ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ದಿನಾಂಕ:02-06-2025 ರಂದು ಕಡೂರು ಟೌನ್ ನ ಕೋಟೆ ವಾಸಿ ಶ್ರೀಮತಿ ಮೀನಾಕ್ಷಮ್ಮ ರವರು ಠಾಣೆಗೆ ಹಾಜರಾಗಿ ತನ್ನ ಗಂಡ ಸುಬ್ರಹ್ಮಣ್ಯ ರವರು ದಿನಾಂಕ:31-05-2025 ರಂದು ಕಾಣಿಯಾಗಿರುವುದಾಗಿ ತಿಳಿಸಿ ಕಡೂರು ಠಾಣಾ ಮೊ.ನಂ. 157/2025 ಕಲಂ ಮನುಷ್ಯ ಕಾಣಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಈ ಮೇಲ್ಕಂಡ ಎರಡೂ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ಡಾ. ಶ್ರೀ ವಿಕಂ ಅಮಟೆ, ಮಾನ್ಯ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ, ಶ್ರೀ ಜಯಕುಮಾರ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ, ಶ್ರೀ ಹಾಲಮೂರ್ತಿ ರಾವ್, ಮಾನ್ಯ ಪೊಲೀಸ್ ಉಪಾಧೀಕ್ಷಕರು, ತರೀಕೆರೆ ಉಪ ವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಶ್ರೀ ರಫೀಕ್.ಎಂ. ಪೊಲೀಸ್ ವೃತ್ತ ನಿರೀಕ್ಷಕರು, ಕಡೂರು ವೃತ್ತ ರವರ ನೇತೃತ್ವದಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಾಗೂ ಕೊಲೆಮಾಡಿದ ಆರೋಪಿಗಳ ಪತ್ತೆಗಾಗಿ ಹಾಗೂ ಕಾಣೆಯಾದ ಸುಬ್ರಹ್ಮಣ್ಯ ರವರ ಪತ್ತೆ ಸಂಬಂಧ ಕಡೂರು ಪೊಲೀಸ್ ಠಾಣಾ ಪಿ ಎಸ್ ಐ ರವರುಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ 02 ಪ್ರತ್ಯೇಕ ತಂಡಗಳನ್ನು ನೇಮಕ ಮಾಡಿರುತ್ತಾರೆ. ನಂತರ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪತ್ತೆ ತಂಡಗಳು ತಾಂತ್ರಿಕ ಹಾಗೂ ವಿವಿಧ ಆಯಾಮಾಗಳಿಂದ ಪರಿಶೀಲಿಸಲಾಗಿ ಮನುಷ್ಯ ಕಾಣಿ ಪ್ರಕರಣದಲ್ಲಿ ಕಾಣೆಯಾದ ವ್ಯಕ್ತಿ ಮತ್ತು ಕೊಲೆಯಾದ ವ್ಯಕ್ತಿಯು ಒಬ್ಬನೆ ಎಂದು ಖಚಿತಪಡಿಸಿಕೊಂಡು ಪ್ರಕರಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳಾದ 1) ಪ್ರದೀಪ್ ಆಚಾರ್ ಜನ್ ಮಲ್ಲೇಶ್ ಆಚಾರ್, 33 ವರ್ಷ, ಕಾರ್ಪೆಂಟರ್ ಕೆಲಸ ವಾಸ ಪ್ಲೇಗಿನಮ್ಮ ದೇವಸ್ಥಾನದ ಹತ್ತಿರ ಕಡೂರು ಟೌನ್, 2) ಸಿದ್ದೇಶ್ ಬಿನ್ ನಂಜುಂಡಪ್ಪ, 35 ವರ್ಷ, ವಿಭೂತಿ ವ್ಯಾಪಾರ ಕೆಲಸ ವಾಸ ಕೋಟೆ ಕಡೂರು ಟೌನ್, 3) ವಿಶ್ವಾಸ್ ಬಿನ್ ಮಂಜುನಾಥ್, 18 ವರ್ಷ, ಕೂಲಿ ಕೆಲಸ ವಾಸ ಫಾರೆಸ್ಟ್ ಆಫೀಸ್ ಹತ್ತಿರ ಕಡೂರು ಟೌನ್ ರವರುಗಳನ್ನು ವಶಕ್ಕೆ ಪಡೆದು ಕೂಲಂಕುಶವಾಗಿ ವಿಚಾರಣೆಗೊಳಪಡಿಸಿದಾಗ ಪ್ರಕರಣದ ಮೊದಲನೇ ಆರೋಪಿಗೂ ಹಾಗೂ ಕೊಲೆಯಾದ ವ್ಯಕ್ತಿಯ ಹೆಂಡತಿಗೂ ಅಕ್ರಮ ಸಂಬಂಧವಿದ್ದು, ಈ ವಿಚಾರದಲ್ಲಿ ತಿಳಿದ ಕೊಲೆಯಾದ ವ್ಯಕ್ತಿಯು ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಮೊದಲನೇ ಆರೋಪಿಯು ಎರಡು ಮತ್ತು ಮೂರನೇ ಆರೋಪಿಗಳಿಗೆ ಹಣದ ಆಮೀಷವನ್ನು ಒಡ್ಡಿ ಅವರುಗಳ ಸಹಾಯ ಪಡೆದು ದಿನಾಂಕ:31-05-2025 ರಂದು ಕಂಸಾಗರ ಗೇಟ್ ಬಳಿ ಎರಡನೇ ಆರೋಪಿಯ ಮಾರುತಿ ಓಮಿನಿ ಕಾರಿನಲ್ಲಿ ಸುಬ್ರಹ್ಮಣ್ಯ ರವರನ್ನು ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ಶವವನ್ನು ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟುಹಾಕಿರುವುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ. ಸದರಿ ಪ್ರಕರಣದಲ್ಲಿ ಒಟ್ಟು 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರುಗಳಿಂದ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆಯಲಾಗಿರುತ್ತದೆ. ನಂತರ ಆರೋಪಿಗಳನ್ನು ಘನ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ ಹಾಗೂ ಪ್ರಕರಣದ ತನಿಖೆ ಮುಂದುವರೆದಿರುತ್ತದೆ.
ಆರೋಪಿಯ ಪತ್ತೆ ತಂಡ & ತನಿಖಾ ತಂಡದಲ್ಲಿ ಶ್ರೀ ರಫೀಕ್.ಎಂ. ಪೊಲೀಸ್ ವೃತ್ತ ನಿರೀಕ್ಷಕರು, ಕಡೂರು ವೃತ್ತ ರವರ ನೇತೃತ್ವದಲ್ಲಿ ಪಿಎಸ್ಐ ರವರುಗಳಾದ ಶ್ರೀ ಪವನ್ ಕುಮಾರ್ ಸಿ.ಸಿ. ಶ್ರೀ ಧನಂಜಯ.ಡಿ.ಹೆಚ್, ಶ್ರೀಮತಿ ಲೀಲಾವತಿ, ಎ.ಎಸ್.ಐ ಶ್ರೀ ವೇದಮೂರ್ತಿ ಹಾಗೂ ಸಿಬ್ಬಂದಿಗಳಾದ ಶ್ರೀ ಮಧು ಕುಮಾರ್, ಹರೀಶ ಬಿ.ಸಿ. ಸ್ವಾಮಿ ಎ.ಓ, ಮಹಮ್ಮದ್ ರಿಯಾಜ್, ಧನಪಾಲ ನಾಯ್ಕ, ಪರಮೇಶ್ವರನಾಯ್ಕ ಜಿ.ಎಸ್. ಈಶ್ವರಪ್ಪ, ಬೀರೇಶ್ ಜಿ.ಕೆ. ಮಂಜುನಾಥ್ ಕೆ.ಎಸ್. ಬೀರೂರು ಪೊಲೀಸ್ ಠಾಣಾ ಅವರಾಧ ವಿಭಾಗದ ಸಿಬ್ಬಂಧಿಯವರಾದ ಹೇಮಂತ್ ಕುಮಾರ್ ಡಿ.ವಿ. ರಾಜಪ್ಪ ಬಿ.ಹೆಚ್ ಹಾಗೂ ಪ್ರಕರಣದ ತನಿಖಾ ತಂಡದಲ್ಲಿ ಶ್ರೀ ವಸಂತ್, ನಜೀರ್, ಕುಚೇಲ, ಮಂಜುನಾಥ್, ನವೀನ್ ಎ.ಆರ್ ಮತ್ತು ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ಅಬ್ದುಲ್ ರಬ್ಬಾನಿ, ನಯಾಜ್ ಅಂಜುಂ ರವರುಗಳು ಕಾರ್ಯ ನಿರ್ವಹಿಸಿದ್ದು, ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ ರವರು ಶ್ಲಾಘಿಸಿ, ಬಹುಮಾನವನ್ನು ಘೋಷಿಸಿರುತ್ತಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ಈ ದಿನ ದಿನಾಂಕಃ 05-06-2025 ರಂದು ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ ಆವರಣದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ ಮತ್ತು ಎ. ಜಿ.ಕಾರ್ಯಪ್ಪ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆ ರವರಿ
ವಿಶ್ವ ಪರಿಸರ ದಿನದ ಅಂಗವಾಗಿ ಈ ದಿನ ದಿನಾಂಕಃ 05-06-2025 ರಂದು ಬೆಳಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ ಆವರಣದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ ಮತ್ತು ಎ. ಜಿ.ಕಾರ್ಯಪ್ಪ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆ ರವರಿಂದ ಗಿಡವನ್ನು ನೆಡುವ ಮುಖಾಂತರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದಿಲೀಪ್ ಕುಮಾರ್* ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ರೀತಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ವೃತ್ತ ಕಛೇರಿ ಮತ್ತು ಉಪ ವಿಭಾಗ ಕಛೇರಿಗಳಲ್ಲಿ, ಆಯಾ *ಡಿಎಸ್.ಪಿ, ಸಿಪಿಐ/ಪಿಐ, ಪಿಎಸ್ಐ* ರವರುಗಳು ಮತ್ತು ಪೊಲೀಸ್ ಸಿಬ್ಬಂಧಿಗಳು ಠಾಣಾ ಮತ್ತು ಕಛೇರಿಗಳ ಆವರಣದಲ್ಲಿ *ಗಿಡಗಳನ್ನು ನಡೆವ ಮುಖಾಂತರ ವಿಶ್ವ ಪರಿಸರ ದಿನವನ್ನು* ಆಚರಿಸಿರುತ್ತಾರೆ.*ಹಸಿರೇ ನಮ್ಮೆಲ್ಲರ ಉಸಿರು, ಕಾಡು ಬೆಳಸಿ ನಾಡು ಉಳಿಸುವ ಸಂಕಲ್ಪ ಮಾಡೋಣ*
ನಾಲ್ವಡಿ ಪ್ರಶಸ್ತಿ: ಕನ್ನಡ ಹೋರಾಟಗಾರರ ಕಡೆಗಣನೆ; ಸಹಾಯ ನಿರ್ದೇಶಕರ ಅಮಾನತಿಗೆ ತೇಜಸ್ವಿ ಆಗ್ರಹ
ಮೈಸೂರು: ನಾಲ್ವಡಿ ಪ್ರಶಸ್ತಿ ವಿಚಾರವಾಗಿ ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಕಮಿಟಿ ಸದಸ್ಯರು ಕನ್ನಡ ಹೋರಾಟಗಾರರ ನ್ನು ಕಡೆಗಣಿಸಿದ್ದಾರೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.
ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ದಿನದಂದು ವಿವಿಧ ಕ್ಷೇತ್ರಗ
ನಾಲ್ವಡಿ ಪ್ರಶಸ್ತಿ: ಕನ್ನಡ ಹೋರಾಟಗಾರರ ಕಡೆಗಣನೆ; ಸಹಾಯ ನಿರ್ದೇಶಕರ ಅಮಾನತಿಗೆ ತೇಜಸ್ವಿ ಆಗ್ರಹ
ಮೈಸೂರು: ನಾಲ್ವಡಿ ಪ್ರಶಸ್ತಿ ವಿಚಾರವಾಗಿ ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಕಮಿಟಿ ಸದಸ್ಯರು ಕನ್ನಡ ಹೋರಾಟಗಾರರ ನ್ನು ಕಡೆಗಣಿಸಿದ್ದಾರೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ.
ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಹಾಗೂ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ವಿಷಯದಲ್ಲಿ ಸಾಧನೆ ಮಾಡಿ ಕೊಡುಗೆ ನೀಡಿ ಹೋರಾಟ ಮಾಡಿರುವ ವರಿಗೆ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.
ಆದರೆ ನಿನ್ನೆ ನಡೆದ ೨೦೨೫ನೇ ಸಾಲಿನ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿವಿಧ ಜಿಲ್ಲೆಗಳ ಇಪ್ಪತ್ತು ಜನರಿಗೆ ರಾಜ್ಯ ಮಟ್ಟದ ಶ್ರೀ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಆದರೆ ಯಾವೊಬ್ಬ ಕನ್ನಡ ಹೋರಾಟಗಾರರಿಗೆ ಈಬಾರಿ ಪ್ರಶಸ್ತಿ ನೀಡದೆ ಕನ್ನಡ ಹೋರಾಟಗಾರರನ್ನು ಕಡೆಗಣಿಸಿರುವುದು ಅಕ್ಷಮ್ಯ ಅಪರಾಧ ಕನ್ನಡ ಹೋರಾಟಗಾರರಿಗೆ ಮಾಡಿದ ಅಪಮಾನ ಎಂದು ತೇಜಸ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ಜಿಲ್ಲೆಯ ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಿದ್ದಾರೆ ಈ ಜಿಲ್ಲೆಗಳಲ್ಲಿ ಒಬ್ಬರು ಕೂಡ ಹೋರಾಟಗಾರರು ನಿಮ್ಮ ಕಣ್ಣಿಗೆ ಕಾಣಲಿಲ್ಲ ವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತೇಜಸ್ವಿ ಪ್ರಶ್ನೆ ಮಾಡಿದ್ದಾರೆ.
ಇದು ಕನ್ನಡಪರ ಹೋರಾಟಗಾರರಿಗೆ ಮಾಡಿದ ಅಪಮಾನ. ಕೂಡಲೇ ಮೈಸೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಅಮಾನತು ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಅವರಿಗೆ ತೇಜಸ್ವಿ ಮನವಿ ಮಾಡಿದ್ದಾರೆ.
ಈ ಕುರಿತು ತಂಗಡಗಿ ಅವರಿಗೆ ಪತ್ರ ಬರೆಯುವುದಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ಏಳು ಜನರಿಗೆ ಸಮಾಜ ಸೇವೆ ಎಂದು ಪ್ರಶಸ್ತಿ ನೀಡಿದ್ದೀರಿ ಇದರಲ್ಲಿ ಒಬ್ಬರಿಗಾದರು ಕನ್ನಡ ಹೋರಾಟಗಾರರಿಗೆ ನೀಡ ಬಹುದಾಗಿತ್ತು. ಕನ್ನಡ ಹೋರಾಟಗಾರರನ್ನು ಕಡೆಗಣಿಸಿರುವುದು ಏಕೆ ಎಂಬುದನ್ನು ಬಹಿರಂಗವಾಗಿ ಹೇಳಿಕೆ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತೇಜಸ್ವಿ ಆಗ್ರಹಿಸಿದ್ದಾರೆ.
ಕಮಿಟಿಯ ಸದಸ್ಯರುಗಳಾದರು ಸಹಾಯಕ ನಿರ್ದೇಶಕರಿಗೆ ಒಬ್ಬ ಕನ್ನಡ ಹೋರಾಟಗಾರರಿಗಾದರೂ ನಾಲ್ವಡಿ ಪ್ರಶಸ್ತಿಯನ್ನು ನೀಡಬೇಕೆಂದು ತಿಳಿಸಬೇಕಿತ್ತು ಯಾತಕ್ಕಾಗಿ ತಿಳಿಸಲಿಲ್ಲ ಎಂದು ಪ್ರಶ್ನಿಸಿ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಈ ಕಮಿಟಿಯನ್ನು ವಜಾಗೊಳಿಸಿ ಹೊಸ ಕಮಿಟಿ ರಚಿಸುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಕನ್ನಡ ಹೋರಾಟಗಾರರ ಕಡೆಗಣನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರೇ ನೇರ ಹೊಣೆ, ಈ ಹಿಂದೆ ಕೂಡ ರೌಡಿ ಶೀಟರ್ ಒಬ್ಬನಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವಾಂತರ ಉಂಟು ಮಾಡಿ ರಾಜ್ಯ ಮಟ್ಟದಲ್ಲಿ ಮೈಸೂರು ಜಿಲ್ಲೆಯ ಮಾರ್ಯದೆ ತೆಗೆದಿದ್ದರು ಕೂಡಲೇ ಇವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈಬಾರಿಯ ನಾಲ್ವಡಿ ಪ್ರಶಸ್ತಿ ಯಲ್ಲಿ ಕನ್ನಡ ಹೋರಾಟಗಾರರನ್ನು ಕಡೆಗಣಿಸಿರುವುದಕ್ಕೆ ದಿಕ್ಕಾರವಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಖಂಡಿಸಿದ್ದಾರೆ.
ಇದೇ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತರೀಕೆರೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ರಚನಾ ಶ್ರೀನಿವಾಸ್ ಅವರು, ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಜಿತ್ ಗೌಡ D L, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಧವನ್ ರಾಜ್ M Y,
ಇದೇ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತರೀಕೆರೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ರಚನಾ ಶ್ರೀನಿವಾಸ್ ಅವರು, ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಜಿತ್ ಗೌಡ D L, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಧವನ್ ರಾಜ್ M Y, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಜ್ ಕೃಷ್ಣಮೂರ್ತಿ ಹಾಗೂ ಮೊಹಮ್ಮದ್ ತಯೀಬ್, ತರೀಕೆರೆ ಬ್ಲಾಕ್ ಅಧ್ಯಕ್ಷರಾದ ಬಾಲಾಜಿ T G, ಅಜ್ಜಂಪುರ ಬ್ಲಾಕ್ ಅಧ್ಯಕ್ಷರಾದ ಚಂದ್ರನಾಯ್ಕ್, ಬಾಳೆಹೊನ್ನೂರು ಬ್ಲಾಕ್ ಅಧ್ಯಕ್ಷರಾದ ರತನ್ ಗೌಡ ಹಾಗೂ ಮಿಥುನ್, ಅಭಿಷೇಕ್ ಹಾಗೂ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಭಾಗವಹಿಸಿ 50ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Established in 2005, arakshakavaninews has been the go-to source for the latest news and trends in the newspaper and magazine industry. Our journey began with a small team of journalists who shared a passion for storytelling and a desire to inform and engage readers. Over the years, we have grown and expanded our team, but our commitment to delivering high-quality content has never wavered.
At arakshakavaninews, we value integrity, accuracy, and creativity. We are committed to providing our readers with truthful and unbiased information, and we strive to be a trusted source of news and information for our community. We believe that great content is a result of hard work, dedication, and a willingness to take risks and try new things.
Our team is made up of talented journalists, editors, and designers who are passionate about their work. We are dedicated to delivering the best possible content to our readers, and we take pride in the quality of our work. We believe that our team is our greatest asset, and we are committed to investing in their professional development and growth.
At arakshakavaninews, we believe in the transformative power of news. Our philosophy revolves around transparency, integrity, and the pursuit of truth.
We celebrate diversity at arakshakavaninews. Our newsroom is a melting pot of ideas and perspectives, ensuring a well-rounded representation of news.
As a responsible news organization, arakshakavaninews is committed to sustainability. We are continuously looking for ways to minimize our environmental impact.
ತರೀಕೆರೆ : ಪುರಸಭಾ ಸದಸ್ಯ ಲೋಕಾಯುಕ್ತ ಬಲೆಗೆ.
What's something exciting your business offers? Say it here.
Give customers a reason to do business with you.
Say something interesting about your business here.
What's something exciting your business offers? Say it here.
Say something interesting about your business here.
What's something exciting your business offers? Say it here.
Have a story idea for us? Would you like to write for us?
Send us a message and let us know what you are thinking about.
Bhovi Colony, 3rd cross, Kodi camp, Tarikere taluk, Chikkamagaluru Dist., Bhovi colony/Lingadahalli main road, Tarikere, KA 577228
Mon | 12:00 am – 12:00 am | |
Tue | 12:00 am – 12:00 am | |
Wed | 12:00 am – 12:00 am | |
Thu | 12:00 am – 12:00 am | |
Fri | 12:00 am – 12:00 am | |
Sat | 12:00 am – 12:00 am | |
Sun | 12:00 am – 12:00 am |
Sign up to get each issue delivered straight to your inbox.
We use cookies to analyze website traffic and optimize your website experience. By accepting our use of cookies, your data will be aggregated with all other user data.