• Home
  • News
  • More
    • Home
    • News
  • Home
  • News

ಆರಕ್ಷಕವಾಣಿ ನ್ಯೂಸ್

ಆರಕ್ಷಕವಾಣಿ ನ್ಯೂಸ್ಆರಕ್ಷಕವಾಣಿ ನ್ಯೂಸ್ಆರಕ್ಷಕವಾಣಿ ನ್ಯೂಸ್

Breaking News in Pictures: The Most Powerful Images from Today's Headlines

    ಕೌಶಲ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದ ಮಾನ್ಯ ಇಂಧನ ಸಚಿವರಾದ ಕೆ.ಜಾರ್ಜ್

     ಕೌಶಲ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದ ಸಚಿವ ಕೆ.ಜಾರ್ಜ್

    ಸಚಿವರ ಅಧ್ಯಕ್ಷತೆಯ ಕೆಲಚಂದ್ರ ಫೌಂಡೇಷನ್ ನಿಂದ ವಿಶೇಷ ಕೌಶಲ್ಯ ತರಬೇತಿ

    ಶಿಕ್ಷಣ, ಕೌಶಲ್ಯ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕಾಳಜಿ: ಸಚಿವರ ಭರವಸೆ


    ಬೆಂಗಳೂರು, ಸೆಪ್ಟೆಂಬರ್ 20, 2025*: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ವಾರ್ಡ್ ನಲ್ಲಿ ಕೆಲಚಂದ್ರ ಫೌಂಡೇಷನ್ ವತಿಯಿಂದ ವಿವಿಧ ಕೌಶಲ್ಯ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಫೌಂಡೇಷನ್ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಹಾಗೂ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಹಾಗೂ ಅವರ ಪತ್ನಿ ಸುಜಾ ಜಾರ್ಜ್ ಅವರು ಶನಿವಾರ ಪ್ರಮಾಣಪತ್ರಗಳನ್ನು ವಿತರಿಸಿದರು.


    ಅಲ್ಪಸಂಖ್ಯಾತ ಮತ್ತು ಹಿಂದುಳಿದವರ್ಗದವರೇ ಹೆಚ್ಚಾಗಿರುವ‌ ಸರ್ವಜ್ಞನಗರ ಕ್ಷೇತ್ರದಲ್ಲಿ ಅಗತ್ಯ ಮೂಲ ಸೌಕರ್ಯ, ಶಿಕ್ಷಣದ ಜತೆಗೆ ಆರೋಗ್ಯ ಮತ್ತು ಕೌಶಲ್ಯಕ್ಕೆ  ಒತ್ತು ನಡುತ್ತಿರುವ ಕೆಲಚಂದ್ರ ಫಂಡೇಷನ್, 219ರಿಂದ ಕೌಶಲ್ಯ ತರಬೇತಿ ಕೇಂದ್ರ ನಡೆಸುತ್ತಿದ್ದು, ಈ ಕೇಂದ್ರದಲ್ಲಿ ತರೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.


    ಪ್ರಮಾಣಪತ್ರ ವಿತರಿಸಿದ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, "ಫೌಂಡೇಷನ್ ವತಿಯಿಂದ ನಿರಂತರವಾಗಿ ಮನೆ ಮನೆ ಸಮೀಕ್ಷೆಯೊಂದಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ಕಂಪ್ಯೂಟರ್ ಕಲಿಕೆ, ಹೊಲಿಗೆ ಕೌಶಲ್ಯ, ಆರ್ಟ್ ಕ್ರಾಫ್ಟ್ ವಿಭಾಗದಲ್ಲಿ ವಿಶೇಷವಾಗಿ ಮೂರು ತಿಂಗಳು ಮತ್ತು ಆರು ತಿಂಗಳ ತರಬೇತಿ ನಡೆಸುತ್ತಿದ್ದು, 2000 ಕ್ಕೂ ಹೆಚ್ಚು ಮಹಿಳೆಯರಿಗೆ ಕೌಶಲ್ಯ ತರಬೇತಿ ಒದಗಿಸಿದೆ, ಸ್ವಾವಲಂಬನೆಯ ಜೀವನಕ್ಕೆ ನೆರವಾಗಿದೆ," ಎಂದು ಹೇಳಿದರು.


    "ಭಾಷಣ ಮಾಡುವ ಜನಪ್ರತಿನಿಧಿ ನಾನಲ್ಲ, ವಿಶೇಷವಾಗಿ ಶಿಕ್ಷಣ, ಕೌಶಲ್ಯ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಫೌಂಡೇಷನ್  ಮೂಲಕ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಫೌಂಡೇಷನ್ ವತಿಯಿಂದ ಕಾಡುಗೊಂಡನಹಳ್ಳಿಯಲ್ಲಿ ಮೊದಲ ಕೌಶಲ್ಯ ತರಬೇತಿ ಕೇಂದ್ರ ಆರಂಭ ಮಾಡಲಾಯಿತು. ಇದೀಗ ಜೀವನಹಳ್ಳಿ ವಾರ್ಡ್ ನಲ್ಲೂ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕೆ.ಜೆ.ಹಳ್ಳಿ ಕೌಶಲ್ಯ ಕೇಂದ್ರ ಮಾದರಿ ಕೇಂದ್ರವಾಗಿದೆ. 2000 ಕ್ಕೂ ಹೆಚ್ಚಿನ ಮಹಿಳೆಯರು ತರಬೇತಿ ಪೂರ್ಣಗೊಳಿಸಿದ್ದಾರೆ," ಎಂದರು.


    "ಮುಂದಿನ ಕೆಲವೇ ದಿನಗಳಲ್ಲಿ ಹೆಚ್.ಬಿ.ಆರ್. ಬಡಾವಣೆಯಲ್ಲಿ ನೂತನ ಆಸ್ಪತ್ರೆ ಲೋಕಾರ್ಪಣೆ ಬಳಿಕ ಎರಡು ಅಂತಸ್ತಿನ ಕೌಶಲ್ಯ ಕೇಂದ್ರ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ. ಸುಜಾ ಜಾರ್ಜ್ ಅವರೂ ಹೆಚ್ಚಿನ ಮುತುವರ್ಜಿವಹಿಸಿ ಕೌಶಲ್ಯ ಹಾಗೂ ಆರೋಗ್ಯ ಸುಧಾರಣೆಗೆ ಮುಂದಾಗಿದ್ದಾರೆ," ಎಂದು ತಿಳಿಸಿದರು.


    "ಕೆ.ಜೆ.ಹಳ್ಳಿ ಕೌಶಲ್ಯ ತರಬೇತಿ ಕೇಂದ್ರವು ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಅಲ್ಲದೆ, ಇಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ 37,000ಕ್ಕೂ ಹೆಚ್ಚು ಜನರಿಗೆ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗಿದೆ. ಡಯಾಬಿಟಿಸ್ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧ ನೀಡುತ್ತಿದ್ದು, ಮಹತ್ವದ ಆರೋಗ್ಯ ಸುಧಾರಣೆಗೆ ನಾಂದಿಯಾಗಿದೆ," ಎಂದು ಹೇಳಿದರು.


    ಕೆಲಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಂಚಾಲಕರಾಗಿರುವ ಡಾ.ಬಿ.ಎಸ್.ತ್ರಿವೇಣಿ ಮಾತನಾಡಿ, "ಇಂಟಿಗ್ರೇಟೆಡ್‌ ಮೆಡಿಕಲ್ ಸೆಂಟರ್ ಆಗಿ ಆರಂಭಗೊಂಡ ಕೆ.ಜೆ.ಹಳ್ಳಿ ಕೇಂದ್ರ ಇಂದು ಸಮರ್ಥ ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿದೆ. ಟೈಲರಿಂಗ್, ಎಂಬ್ರಾಯಿಡರಿ, ಕಂಪ್ಯೂಟರ್ ಕಲಿಕೆ ಮತ್ತು ಆರ್ಟ್ ಅಂಡ್ ಕ್ರಾಫ್ಟ್ ತರಬೇತಿ ಮತ್ತು ಸ್ವಾವಲಂಬಿ ಜೀವನಕ್ಕೆ ನೆರವಾಗಿದೆ. ಮೂರು ತಿಂಗಳ ಕಂಪ್ಯೂಟರ್ ಕಲಿಕೆ, ಆರು ತಿಂಗಳ ಹೊಲಿಗೆ, ಎಂಬ್ರಾಯಿಡರಿ ತರಬೇತಿಯನ್ನು ಫೌಂಡೇಷನ್ ನಡೆಸುತ್ತಿದೆ. ಪ್ರಸ್ತುತ 2000 ಕ್ಕೂ ಹೆಚ್ಚಿನ ಮಹಿಳೆಯರು ತರಬೇತಿ ಪಡೆದಿದ್ದಾರೆ. ಕಂಪ್ಯೂಟರ್ ಕಲಿಕೆ ನಂತರ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ," ಎಂದು ಮಾಹಿತಿ ನೀಡಿದರು. 


    ಪ್ರಮಾಣಪತ್ರ ಪಡೆದ ಬಳಿಕ ಕೌಶಲ್ಯ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು, ಕೆಲಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರ ನೆರವಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಫೌಂಡೇಷನ್ ಉಪಾಧ್ಯಕ್ಷರಾದ ಸುಜಾ ಜಾರ್ಜ್, ಕಾಡುಗೊಂಡನಹಳ್ಳಿ ವಾರ್ಡ್ ಮುಖಂಡರು, ಸ್ಥಳೀಯ ನಾಯಕರು ಉಪಸ್ಥಿತರಿದ್ದರು.  



    ರಸ್ತೆಗಳ ಸ್ಥಿತಿಗತಿ ಸಮೀಕ್ಷೆಗೆ ಸಚಿವ ಕೆ.ಜೆ.ಜಾರ್ಜ್ ಸೂಚನೆ


    ಬಳಿಕ ಬಾಣಸವಾಡಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಿದ ಸಚಿವ ಕೆ.ಜೆ.ಜಾರ್ಜ್, ಕ್ಷೇತ್ರದ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಸಚಿವರು ರಸ್ತೆ ಸ್ತಿತಿಗತಿಯ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು. 


    ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳ ಸುಧಾರಣೆ ಮಾಡಿ, ಗುಂಡಿಗಳನ್ನು ವೈಜ್ಞಾನಿಕ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ರಸ್ತೆಗಳ ಸಮೀಕ್ಷಾ ವರದಿ ಪರಿಶೀಲಿಸಿದ ಸಚಿವರು, ನೆಪ ಹೇಳದೆ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿ. ಖುದ್ದಾಗಿ ರಸ್ತೆಗಳ ಪರಿಶೀಲನೆ ನಡೆಸುವುದಾಗಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಚಳ್ಳಕೆರೆ ಜಾಮಿಯಾ ಮಸೀದಿ ಅಧ್ಯಕ್ಷರಾದ ಯಾಕೂಬ್ ಅಲಿ ಇವರಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮ ಚಾಲನೆ

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಜಾಮಿಯಾ ಮಸೀದಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಗಳು

     ಹಾಗೂ ಜಾಮಿಯಾ ಮಸೀದಿ ಅಧ್ಯಕ್ಷರಾದ  ಯಾಕೂಬ್ ಅಲಿ ಹಾಗೂ ಕ ಮೀಟಿ ವತಿಯಿಂದ   ದಿನೇ

     ದಿನೇ ಹೊಸ ಹೊಸ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಮಕ್ಕಳಿಗೆ & ವಿದ್ಯಾರ್ಥಿಗಳಿಗೆ ಪ್ರೋತ್ಸಾಹ 

    ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಮೆಟಿಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಂದ

     ನಗರದ ಸರಕಾರಿ ಉರ್ದು ಶಾಲೆಯ ಮಕ್ಕಳಿಗೆ  ಪ್ರತಿಭಾ ಸ್ಪರ್ಧೆ ಕಾರ್ಯಕ್ರಮ ಮಾಡುವ ಮೂಲಕ 

     ಮಕ್ಕಳಿಗೆ ಹಣದ ರೂಪದಲ್ಲಿ ಬಹುಮಾನ ವನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ   ಜಾಮಿಯಾ ಮಸೀದಿಯ ಅಧ್ಯಕ್ಷರಾದ  ಯಾಕೂಬ್ ಅಲಿ ಮಾತನಾಡಿ ಮುಂದಿನ ದಿನದಲ್ಲಿ ಮಕ್ಕಳು ವಿದ್ಯಾಭ್ಯಾಸ 

    ಮಾಡಿ ಒಳ್ಳೆಯ ಸ್ಥಾನ ಮಾನ ಪಡೆದುಕೊಳ್ಳಬೇಕೆಂದು ಕಿವಿ ಮಾತು ತಿಳಿಸಿದರು, ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿಯ ಉಪಾಧ್ಯಕ್ಷ ಇಂಜಿನಿಯರ್ ರಾಜ ಮುಜೀಬುಲ್ಲ ಹಾಗೂ ಸದಸ್ಯರಾದ ಕಲೀಮುಲ್ಲಾ, ಸಲೀಂ, ತೌಸೀಫ್, ಮಾಸ್ತನ್, ಇನ್ನು  ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತ ಚಳ್ಳಕೆರೆ ಜಾಮಿಯಾ ಮಸೀದಿ ರಿದ್ದರು .

    ಋತುಚಕ್ರ ಶುಚಿತ್ವ ನಿರ್ವಹಣೆ ಮತ್ತು ಸ್ವಚ್ಛತ ಬಗ್ಗೆ ಅರಿವು ಕಾರ್ಯಕ್ರಮ

    ಕರ್ನಾಟಕ ಸರ್ಕಾರ, ಸರ್ಕಾರಿ ಆಯುರ್ವೇದ ಆಸ್ಪತ್ರೆ,  ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ತರೀಕೆರೆ, ಗ್ರಾಮ ಪಂಚಾಯಿತಿ ದೋರನಾಳು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಹೆಚ್. ರಂಗಾಪುರ  ಇವರ ಸಹಯೋಗದೊಂದಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 250 ಹೆಣ್ಣು ಮಕ್ಕಳಿಗೆ "*ಋತುಚಕ್ರ ಶುಚಿತ್ವ ನಿರ್ವಹಣೆ ಮತ್ತು ಸ್ವಚ್ಛತೆ *" ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

    ಈ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಲಿಂಗರಾಜು, ದೋರನಾಳು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶೀಲಾವತಿ ಕೃಷ್ಣಮೂರ್ತಿ, ಡಾ.ಸುಮನ ಕಿಶೋರ್, ಡಾ.ಕಿಶೋರ್ ಕುಮಾರ್ ಬಿ.ವಿ., ರೋಟರಿ ಕ್ಲಬ್ ಅಧ್ಯಕ್ಷರಾದ ಬಿ.ಪಿ.ರವಿ ಕುಮಾರ್, ಕಾರ್ಯದರ್ಶಿಗಳಾದ ಪ್ರವೀಣ್ ಪಿ, ಕನ್ನಡ ಸಾಹಿತ್ಯ ಪರಿಷತ್ತು ತರೀಕೆರೆಯ ಮಹಿಳಾ ಘಟಕದ ಅಧ್ಯಕ್ಷರಾದ ಸುನಿತಾ ಕಿರಣ್,ಇನ್ನರ್ ವೀಲ್ ಕ್ಲಬ್ ನ ಸದಸ್ಯನಿಯರಾದ ಲಕ್ಷ್ಮಿ ನಿತಿನ್, ದೋರನಾಳು ಗ್ರಾಮ ಪಂಚಾಯಿತಿಯ ಸದಸ್ಯರಾದ ತಿಪ್ಪೇಶಪ್ಪ ಡಿ.ಬಿ.,ಚಂದ್ರಮ್ಮ ಕೆ.ಸಿ.,ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕರಾದ ಶಶಿಕುಮಾರ್, ರವಿ ಬಿ.ಎಂ., ಮಂಜುನಾಥ್ ಏನ್. ಬಿ., ಭರತ್, ಶಿಕ್ಷಕಿರಾದ ರಾಣಿ, ಕಾವ್ಯ, ಭವ್ಯ,ಅನುಷಾ, ಆಯಿಷಾ ಬೇಗಂ ಮತ್ತು ಮಕ್ಕಳು ಭಾಗವಹಿಸಿದ್ದರು.


     ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ *ಡಾ.ಸುಮನ ಕಿಶೋರ್, ಆತ್ರೇಯ ಕ್ಲಿನಿಕ್*, ತರೀಕೆರೆ  ಅವರು ಋತುಚಕ್ರ ಶುಚಿತ್ವ ನಿರ್ವಹಣೆ ಮತ್ತು ಆರೋಗ್ಯ*ದ ಬಗ್ಗೆ ಮಾತನಾಡಿ ಪ್ರತಿ ಹೆಣ್ಣುಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಮುಟ್ಟಿನ ದಿನಗಳನ್ನು ಎದುರಿಸುತ್ತಾರೆ. ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಋತುಮತಿಯಾಗುತ್ತಾರೆ, ಋತುಸ್ರಾವ ಒಂದು ನೈಸರ್ಗಿಕ ಪ್ರಕ್ರಿಯೆ ಹಾಗೂ ಋತುಸ್ರಾವದ ಸಮಸ್ಯೆಗಳು, ಸ್ವಚ್ಛತೆ, ಮುಟ್ಟಿನ ಆರೋಗ್ಯದ ಮಹತ್ವ, ಮುಟ್ಟಿನ ಉತ್ಪನ್ನಗಳ ಸೂಕ್ತ ಬಳಕೆ, ಮುಟ್ಟಿನ ಸಮಯದಲ್ಲಿನ ಆಹಾರ ಕ್ರಮ, ಋತುಚಕ್ರ ಮತ್ತು ಜೀವನದ ಗುಣಮಟ್ಟ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೆಣ್ಣು ಮಕ್ಕಳಿಗೆ ನೀಡಿದರು. 


     *ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಎಲ್ಲಾ ಮಕ್ಕಳಿಗೂ ರೋಟರಿ ಕ್ಲಬ್ ವತಿಯಿಂದ  ಉಚಿತವಾಗಿ ಪ್ಯಾಡ್ ಗಳನ್ನು ವಿತರಿಸಲಾಯಿತು*. ಮತ್ತು *ಗ್ರಾಮ ಪಂಚಾಯಿತಿ ದೋರನಾಳು ವತಿಯಿಂದ ವೈದ್ಯರು, ರೋಟರಿ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪ್ರಾಂಶುಪಾಲರು, ಶಿಕ್ಷಕರಿಗೆ ಸನ್ಮಾನಿಸಲಾಯಿತು*. 


    ಕಾರ್ಯಕ್ರಮದ  ನಿರೂಪಣೆ ಮತ್ತು ವಂದನಾರ್ಪಣೆಯನ್ನು ಡಾ.ಕಿಶೋರ್ ಕುಮಾರ್ ಬಿ.ವಿ. ಇವರು ನೆರವೇರಿಸಿದರು.


    ಪರಿಸರಕ್ಕೆ ಹಾನಿಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಸಚಿವ ಕೆ.ಜೆ.ಜಾರ್ಜ್

     ಪರಿಸರಕ್ಕೆ ಹಾನಿಯಾಗದಂತೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಸಚಿವ ಕೆ.ಜೆ.ಜಾರ್ಜ್*


    ಯೋಜನೆ ಅನುಷ್ಠಾನಕ್ಕೇ ಕೇಂದ್ರ ವನ್ಯಜೀವಿ ಮಂಡಳಿ ಅನುಮತಿ ನೀಡಿದೆ

    ಯೋಜನೆ ಕುರಿತಂತೆ ಸ್ಥಳೀಯರಲ್ಲಿ ಯಾವುದೇ ಆತಂಕ ಬೇಡ*


    ಚಿಕ್ಕಮಗಳೂರು, ಸೆ.12, 2025*: ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಂಡಳಿ ಅನುಮೋದನೆ ನೀಡಿದ್ದು, ಸ್ಥಳೀಯರ ಮನವೊಲಿಸಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿಗಳೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.


    ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಆ ಭಾಗದ ಜನರಿಗೆ ಯಾವುದೇ ಆತಂಕ ಬೇಡ. ಪರಿಸರದ ಮೇಲೆ ದುಷ್ಪರಿಣಾಮ ಬೀರದಂತೆ ಯೋಜನೆ ಜಾರಿಗೊಳಿಸಲಾಗುವುದು. ಪರಿಸರದ ಮೇಲೆ ದೊಡ್ಡ ಮಟ್ಟದಲ್ಲಿ ಹಾನಿಯಾಗುವುದಿಲ್ಲ. ಈ ವಿಚಾರವನ್ನು ಜನರಿಗೆ ತಿಳಿಸಿ ಅವರ ಮನವೊಲಿಸಲಾಗುವುದು ಎಂದರು.


    2000 ಮೆಗಾವ್ಯಾಟ್ ಸಾಮರ್ಥ್ಯ ಈ ಯೋಜನೆ ಅನುಷ್ಠಾನಕ್ಕೆ ಕೇವಲ ಕೇವಲ 120 ಎಕರೆ ಜಮೀನು ಸಾಕು.ಇದರಲ್ಲಿ 50 ಎಕರೆ ಖಾಸಗಿಯಾಗಿದ್ದು, ಉಳಿದಂತೆ ಕಂದಾಯ ಮತ್ತು ಅರಣ್ಯ ಮತ್ತು ಕಂದಾಯ ಭೂಮಿಯನ್ನು ಬಳಸಿಕೊಳ್ಳಲಾಗುತ್ತದೆ. ಖಾಸಗಿಯವರ ಭೂಮಿಗೆ ಸೂಕ್ತ ಪರಿಹಾರ ನೀಡಲಾಗುವುದು. ಯೋಜನೆಗೆ ಬಳಸಿಕೊಳ್ಳುವ ಅರಣ್ಯಕ್ಕೆ ಬದಲಾಗಿ ಅರಣ್ಯ ಇಲಾಖೆಗೆ ಅರಣ್ಯೀಕರಣಕ್ಕೆ ಬೇಕೆ ಕಡೆಭೂಮಿ ನೀಡಲಾಗುವುದು ಎಂದು ತಿಳಿಸಿದರು.


    ಪಂಪ್ಡ್ ಸ್ಟೋರೇಜ್ ಯೋಜನೆಗೆ ಹೊಸ ಜಲಾಶಯಗಳನ್ನು ನಿರ್ಮಿಸುವುದರಿಂದ ನದಿ ಹರಿವಿಗೂ ಅಡ್ಡಿಯಾಗುವುದಿಲ್ಲ. ಗೇರುಸೊಪ್ಪದಿಂದ ಪೈಪ್ ಲೈನ್ ಮೂಲಕ ನೀರನ್ನು ಮೇಲಿನ ಹಂತದಲ್ಲಿರುವ ತಲಕಳಲೆ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ. ಈ ಪೈಲ್ ಲೈನ್ ಗಳು ನೆಲದ ಒಳಗೆ ಇರುತ್ತದೆ. ಬಹುತೇಕ ನಿರ್ಮಾಣಗಳು ಸುರಂದ ಒಳಗೇ ಇರುವುದರಿಂದ ಯೋಜನೆಯಿಂದ ದೊಡ್ಡಮಟ್ಟದಲ್ಲಿ ಪರಿಸರಕ್ಕೆ ಹಾನಿಯಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯೋಜನೆ ಅನುಷ್ಠಾನವಾದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚುವರಿಯಾಗಿ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಮತ್ತು ಅಗತ್ಯ ಸಂದರ್ಭದಲ್ಲಿ ಗ್ರಾಹಕರಿಗೆ ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.


    ರೈತರಿಗೆ ಸೌರ ವಿದ್ಯುತ್:*


    ರೈತರ ನೀರಾವರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಕುಸುಮ್ ಬಿ ಯೋಜನೆ ಅನುಷ್ಠಾಗೊಳಿಸಲಾಗಿದೆ. ವಿದ್ಯುತ್ ಫೀಡರ್ ನಿಂದ 500 ಮೀಟರ್ ಗಿಂತ ದೂರ ಇರುವ ಕೊಳವೆ ಬಾವಿಗಳಿಗೆ ಕುಸುಮ್ ಬಿ ಯೋಜನೆಯಡಿ ಸೌರವಿದ್ಯುತ್ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶೇ. 80ರಷ್ಟು ಸಬ್ಸಿಡಿ ನೀಡಲಾಗುವುದು. ಇನ್ನುಳಿದ ಶೇ. 20 ರಷ್ಟು ಹಣವನ್ನು ಮಾತ್ರ ಫಲಾನುಭವಿ ಭರಿಸಬೇಕು ಎಂದು ಹೇಳಿದರು.


    ಅದೇ ರೀತಿ ಕುಸುಮ್ ಸಿ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಸೌರ ವಿದ್ಯುತ್ ತಯಾರಿಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ 10 ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅನುಷ್ಠಾನವಾದಲ್ಲಿ 2500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಯಾಗಲಿದೆ ಎಂದು ಹೇಳಿದರು.


    ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸಬ್ ಸ್ಟೇಷನ್ ಗಳಲ್ಲಿ ಅಥವಾ ಲೈನ್ ಗಳಲ್ಲಿ ಸಮಸ್ಯೆ ಇರುವೆಡೆ ಮಾತ್ರ ವಿದ್ಯುತ್ ವ್ಯತ್ಯಯವಾಗುತ್ತಿರಬಹುದು. ಹೀಗಾಗಿಯೇ ಪ್ರತಿ ವರ್ಷ ರಾಜ್ಯದಲ್ಲಿ 100 ಹೊಸ ಸಬ್ ಸ್ಟೇಷನ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.


    ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಇದ್ದರು.

    ತಾಲೂಕು ಪಂಚಾಯಿತಿ ತರೀಕೆರೆ ಹಾಗೂ ಪುರಸಭೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಕಾರ್ಯಕ್ರಮ.

    ತಾಲೂಕು ಆಡಳಿತ ತರೀಕೆರೆ , ತಾಲೂಕು ಪಂಚಾಯಿತಿ ತರೀಕೆರೆ ,ಪುರಸಭೆ ತರೀಕೆರೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಂದಾಯ ಗ್ರಾಮ ಉಪಗ್ರಾಮಾ 94 ಸಿ  ಪೋಡಿ ಮುಕ್ತ ಗ್ರಾಮ ಸ್ವಾಮಿತ್ವ ಯೋಜನೆಯ  ಹಕ್ಕು ಪತ್ರಗಳು ದಾಖಲೆಗಳು ಹಾಗೂ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಮತ್ತು ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿ ಸಂವಹನ ಕಾರ್ಯಕ್ರಮವು ಬಯಲು ಮಂದಿರ ತರೀಕೆರೆಯಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು ತರೀಕೆರೆಯ ಜನಪ್ರಿಯ ಶಾಸಕರಾದ ಜಿಎಚ್ ಶ್ರೀನಿವಾಸ್ ರವರು ತರೀಕೆರೆ ತಾಲೂಕಿನ ವಿವಿಧ ಸರ್ಕಾರಿ ಯೋಜನೆಗಳ ಇಲಾಖೆಯ ಪ್ರದರ್ಶನದ ಮಳಿಗೆಯ ಅಂಗನವಾಡಿ ಕಾರ್ಯಕರ್ತೆಯರು ಅರಣ್ಯ ಇಲಾಖೆ ತೋಟಗಾರಿಕೆ ಇಲಾಖೆ ಆರೋಗ್ಯ ಇಲಾಖೆ ಸ್ವಸಹಾಯ ಸಂಘದ ಫಲಾನುಭವಿಗಳ ಮಳಿಗೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆಯನ್ನು ನೀಡಿದರು ಶಾಸಕರೊಂದಿಗೆ ಜಿಲ್ಲಾ ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತರೀಕೆರೆ ತಾಲೂಕು ಉಪ ವಿಭಾಗ ಅಧಿಕಾರಿಗಳು ತರೀಕೆರೆಯ ತಹಶೀಲ್ದಾರ್ ಹಾಗೂ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ತರೀಕೆರೆ ತಾಲೂಕಿನ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸದಸ್ಯರುಗಳು ಇನ್ನಿತರ ಗಣ್ಯರು ಭಾಗವಹಿಸಿದ್ದರು ಹಾಗೆಯೇ ಭದ್ರ ಬಾಲ್ಯದ ಪ್ರಧಾನ ಆಶಯಗಳಲ್ಲಿ ಒಂದಾದ ಗ್ರಾಮ ಪಂಚಾಯಿತಿ ಮಟ್ಟದ ಕಾವಲು ಸಮಿತಿ ಸದಸ್ಯರ ತರಬೇತಿದಾರರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರಂಭವನ್ನು ಉದ್ಘಾಟನೆ ಮಾಡಿ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತರೀಕೆರೆಯ ಶಾಸಕರು ಬಾಲ್ಯ ವಿವಾಹದಲ್ಲಿ ಚಿಕ್ಕಮಗಳೂರು ಜಿಲ್ಲೆಯು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು ಪ್ರತಿ ಮಗು ಸುರಕ್ಷಿತ ಗೌರವ ಪೂರ್ವಕ ಮತ್ತು ಸಬಲೀಕೃತ ಬಾಲ್ಯವನ್ನು ಅನುಸರಿಸುವಂತೆ ಮಾಡುವ ಪರಿಕಲ್ಪನೆ ಎಂದು ಶಾಸಕರು ಮಾತನಾಡಿದ್ದಾರೆ ರಂಗ ಮಂದಿರ ತರೀಕೆರೆಯಲ್ಲಿ ಕಂದಾಯ ಗ್ರಾಮದ ಬಗ್ಗೆ ಉಪ ಗ್ರಾಮ ತೊಂಬತ್ತ ನಾಲ್ಕು ಸಿ ಪೋಡಿ ಮುಕ್ತ ಗ್ರಾಮದ ಬಗ್ಗೆ ಶಾಸಕರಾದ ಜಿಎಚ್ ಶ್ರೀನಿವಾಸರವರು ಸಭೆಯಲ್ಲಿ ಮಾತನಾಡಿ ಹಲವಾರು ಗ್ರಾಮಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಕಟ್ಟಡ ಕಾರ್ಮಿಕರು ಎಲೆಕ್ಟ್ರಾನಿಕ್, ತಂತ್ರಜ್ಞಾನದ ರಿಗೂ ಕಿಟ್ ವಿತರಣೆ ಮಾಡಿದರುಈ ಕಾರ್ಯಕ್ರಮದಲ್ಲಿ ತರೀಕೆರೆ ಉಪ ವಿಭಾಗಧಿಕಾರಿಗಳು ತರೀಕೆರೆಯ ತಹಶೀಲ್ದಾರ್ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ತರೀಕೆರೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಪಂಚಾಯಿತಿಯ ಸದಸ್ಯರುಗಳು ತರೀಕೆರೆಯ ಜನಪ್ರತಿನಿಧಿಗಳು ಸಮಸ್ತ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

    ಬ್ರಹ್ಮಾ ಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯದ ಡಾ|| ಪ್ರಕಾಶ್ ಮಣಿ ದಾದಿಜೀ ಅವರ 18 ನೇ ವರ್ಷದ ಪುಣ್ಯ ಸ್ಮೃತಿ ದಿನ

    ಬ್ರಹ್ಮಾ ಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯದ ಡಾ|| ಪ್ರಕಾಶ್ ಮಣಿ ದಾದಿಜೀ ಅವರ 18 ನೇ ವರ್ಷದ ಪುಣ್ಯ ಸ್ಮೃತಿ ದಿನವನ್ನು  ವಿಶ್ವಭಂದುತ್ವ ದಿನವಾಗಿ ಆಚರಿಸಲಾಗುತ್ತಿದ್ದು ಅದರ ಅಂಗವಾಗಿ 1 ಲಕ್ಷ ಯುನಿಟ್ ರಕ್ತವನ್ನು ಸಮಾಜ ಸೇವೆಗೆ ಅರ್ಪಿಸುವ ಸಲುವಾಗಿ ರಕ್ತದಾನ ಕಾರ್ಯಕ್ರಮವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆ,  ರಕ್ತ ನಿಧಿ ಕೇಂದ್ರ, ಮೆಗ್ಗಾನ್ ಭೋದನ ಆಸ್ಪತ್ರೆ, ಶಿವಮೊಗ್ಗ, ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ಮಮತ ಮಹಿಳಾ ಸಮಾಜ, ಸರ್ಕಾರಿ ಪಾಲಿಟೆಕ್ನಿಕ್ ಭಾವಿಕೆರೆ, ಇವರ ಸಹಯೋಗದಲ್ಲಿ, ದಿನಾಂಕ 22 ನೆ ಶುಕ್ರವಾರ, ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾನಿಲಯ  ವೆಂಕಟರಾಯನ ಬೀದಿ  ಇಲ್ಲಿ ನಡೆಯಲಿದೆ ಎಂದು ಬ್ರಹ್ಮ ಕುಮಾರಿ ಸಂಸ್ಥೆ ಯ ಮುಖ್ಯಸ್ಥ ಕಲೈ ವಾಣಿ ತಿಳಿಸಿದರು. ರಕ್ತ ದಾನ ಮಾಡುವುದು ಅತ್ಯಂತ ಶ್ರೇಷ್ಟ ಕಾರ್ಯ ವಾಗಿದ್ದು,  ಸಾರ್ವಜನಿಕ ರು ರಕ್ತ ದಾನ. ಮಾಡುವ ಮೂಲಕ ಅಗತ್ಯ ಇರುವ ವರಿಗೆ ನೇರವಾಗುವಂತೆ ಮನವಿ ಮಾಡಿದರು.  ರಕ್ತ ದಾನದ ಮಹತ್ವ ಕುರಿತಂತೆ,  ಬ್ಯಾನೆರ್ ಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಳವಡಿಸುವ ಜೊತೆಗೆ ಕರ ಪತ್ರ ಗಳ ಮೂಲಕ ಮಾಹಿತಿ ನೀಡಲಾಗುವುದು ಎಂದರು.


    . ಈ  ಸಂಧರ್ಭ ದಲ್ಲಿ ತರೀಕೆರೆ ರೋಟರಿ ಕ್ಲಬ್ ಅಧ್ಯಕ್ಷರಾದ  ರವಿಕುಮಾರ್ ಬಿ ಪಿ,  ತರೀಕೆರೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ  ಟಿ ಎಮ್ ಹರೀಶ್, ಲಯನ್ಸ್ ಕ್ಲಬ್ ಖಜಾಂಚಿ ಟಿ ಎಮ್ ನವೀನ್ , ತರೀಕೆರೆ ಸೀನಿಯರ್ ಚೆಂಬರ್ ಅಧ್ಯಕ್ಷರಾದ ಆಶಾ ಬೊಸ್ಲೆ, ಮಮತಾ ಸಮಾಜದ ಅಧ್ಯಕ್ಷರಾದ  ಮಂಜುಳಾ ವಿಜಯಕುಮಾರ್, ಕಾರ್ಯದರ್ಶಿ ರೋಹಿಣಿ ಎನ್ ಮೂರ್ತಿ , ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಲಿಖಿತ್, ಹಾಗೂ  ನ್ಯಾಯವಾದಿ ಜಿ. ಸುಬ್ರಹ್ಮಣ್ಯ, ಬ್ರಹ್ಮಾ ಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯದ   ಸಹೋದರಿ ಬಿ ಕೆ ಕವಿತೆ  ಹಾಜರಿದ್ದು ಸಲಹೆ ನೀಡಿದರು


    ಭೂಮಿ -ವಸತಿ "ಹಕ್ಕು ಮಾನ್ಯ ಮಾಡುವ "ಸಾಮಾಜಿಕ ನ್ಯಾಯ"ಕ್ಕಾಗಿ ಆಗ್ರಹ

    ಭೂಮಿ -ವಸತಿ "ಹಕ್ಕು ಮಾನ್ಯ ಮಾಡುವ "ಸಾಮಾಜಿಕ ನ್ಯಾಯ"ಕ್ಕಾಗಿ ಆಗ್ರಹ

    ಭೂಮಿ -ವಸತಿ "ಹಕ್ಕು ಮಾನ್ಯ ಮಾಡುವ "ಸಾಮಾಜಿಕ ನ್ಯಾಯ"ಕ್ಕಾಗಿ ಆಗ್ರಹ..........................

    .. ತರೀಕೆರೆ ಆಗಸ್ಟ್ 21 -- ದಿವಂಗತ ದೇವರಾಜ ಅರಸು ರವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪ

    ಡಿಯ ಮೂಲಕ  ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತಂದರು. ಎಂದು ಭೂಮಿ 

    ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಎಂ ಓಂಕಾರಪ್ಪನವರು

     ಇಂದು ಪಟ್ಟಣದ ತಾಲೂಕು ಆಡಳಿತ ಕಚೇರಿಯ ಮುಂದಿನ ಡಾ. ಬಿಆರ್

    ಭೂಮಿ -ವಸತಿ "ಹಕ್ಕು ಮಾನ್ಯ ಮಾಡುವ "ಸಾಮಾಜಿಕ ನ್ಯಾಯ"ಕ್ಕಾಗಿ ಆಗ್ರಹ..........................

    .. ತರೀಕೆರೆ ಆಗಸ್ಟ್ 21 -- ದಿವಂಗತ ದೇವರಾಜ ಅರಸು ರವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪ

    ಡಿಯ ಮೂಲಕ  ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ಜಾರಿಗೆ ತಂದರು. ಎಂದು ಭೂಮಿ 

    ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಎಂ ಓಂಕಾರಪ್ಪನವರು

     ಇಂದು ಪಟ್ಟಣದ ತಾಲೂಕು ಆಡಳಿತ ಕಚೇರಿಯ ಮುಂದಿನ ಡಾ. ಬಿಆರ್ ಅಂಬೇಡ್ಕರ್ ರವರ ಪುತ್ತಳಿಗೆ

     ಮಾಲಾರ್ಪಣೆ ಮಾಡಿ ಮಾತನಾಡಿದರು. ಇಂದು ದಿವಂಗತ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ 110ನೇ ಜನ್ಮದಿನದ ಪ್ರಯುಕ್ತ ವಿವಿಧ ದಲಿತ ಸಂಘಟನೆಗಳ ಮುಖಂಡರೊಂದಿಗೆ ಬಾಬಾ ಸಾಬ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ  ಅವರ ಪುತ್ಥಳಿಯ ಎದುರು ಪತ್ರಿಕಾಗೋಷ್ಠಿ ನಡೆಸಿದರು. ಬಗರ್ ಹುಕುಂ  ಸಾಗುವಳಿದಾರರು  ಅರ್ಜಿ ಸಲ್ಲಿಸಿದ್ದು ರಾಜ್ಯ ಸರ್ಕಾರದ ಲೆಕ್ಕದಲ್ಲಿ 33 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಇದ್ದು ಇದರಲ್ಲಿ ಶೇ% 90ರಷ್ಟು ಅರ್ಜಿಗಳನ್ನು ತಿರಸ್ಕರಿಸಿ ವಿಲೇವಾರಿ ಮಾಡಿದೆ. ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿ ಮಾಡದೆ ಅರಣ್ಯ ಅಧಿಕಾರಿಗಳು ಪರಿಸರದ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದು ಆದಿವಾಸಿ ಇನ್ನಿತರೆ ಜನ ಸಮುದಾಯಗಳಿಗೆ ಸಂವಿಧಾನ ಬದ್ಧ ಹಕ್ಕನ್ನು ನಿರಾಕರಿಸಲಾಗುತ್ತಿದೆ ಕಾನೂನು ಬದ್ಧವಾಗಿರುವ ಅರಣ್ಯ ಹಕ್ಕು ಕಾಯ್ದೆಯನ್ನು ನಿರ್ಜೀವ ಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಉಳುವವನೇ ಭೂ ಒಡೆಯ ನೀತಿಯನ್ನು ಜಾರಿ ಮಾಡದಂತೆ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸರ್ಕಾರವಾಗಿ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವರಿಗೆ ಭೂ ಮಂಜೂರಾತಿ ನೀಡಲು ಒನ್ ಟೈಮ್ ಸೆಟ್ಲ್ಮೆಂಟ್   ಜಾರಿ ಮಾಡುವ ಮೂಲಕ ಬಡವರಿಗೆ ನ್ಯಾಯ ದೊರಕಿಸಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸುತ್ತಿದೆ  ಎಂದು ಹೇಳಿದರು. ಮಹಾತ್ಮ ಪ್ರೊ  ಬಿ ಕೃಷ್ಣಪ್ಪ ಸ್ಥಾಪಿತ  ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್ ವಿ ಬಾಲರಾಜ್, ತಾಲೂಕು ಸಂಚಾಲಕರಾದ ರಾಜಪ್ಪ, ಕುಮಾರಪ್ಪ, ಮಂಜಪ್ಪ, ಸಿದ್ದರಾಮಪ್ಪ, ಶಿವರಾಜ್, ಪರಮೇಶ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

    ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪೆಟ್ರೋಲಿನಿಂದ ಸುಟ್ಟು ತಲೆಮರಿಸಿಕೊಂಡಿದ್ದ ಮೂರು ಜನ ಆರೋಪಿಗಳ ಬಂಧನ.

    ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ನಿಂದ ಸುಟ್ಟು ತಲೆಮರೆಸಿಕೊಂಡಿದ್ದ 03 ಜನ ಕೊಲೆ ಆರೋಪಿಗಳ ಬಂಧನ


    ದಿನಾಂಕ:02-06-2025 ರಂದು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಸಾಗರ ಗೇಟ್ ಬಳಿ ಯಾವುದೋ ಅನಾಮಧೇಯ ವ್ಯಕ್ತಿಯ ದೇಹವು ಸುಟ್ಟ ಸ್ಥಿತಿಯಲ್ಲಿರುವುದಾಗಿ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಸದರಿ ಮೃತ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿ ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್

    ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ನಿಂದ ಸುಟ್ಟು ತಲೆಮರೆಸಿಕೊಂಡಿದ್ದ 03 ಜನ ಕೊಲೆ ಆರೋಪಿಗಳ ಬಂಧನ


    ದಿನಾಂಕ:02-06-2025 ರಂದು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಸಾಗರ ಗೇಟ್ ಬಳಿ ಯಾವುದೋ ಅನಾಮಧೇಯ ವ್ಯಕ್ತಿಯ ದೇಹವು ಸುಟ್ಟ ಸ್ಥಿತಿಯಲ್ಲಿರುವುದಾಗಿ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿ ಸದರಿ ಮೃತ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿ ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟು ಹಾಕಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿರುವುದು ಕಂಡು ಬಂದ ಮೇರೆಗೆ ಫಿರ್ಯಾದುದಾರರಾದ ಶ್ರೀ ಹೆಚ್ ಶ್ರೀನಿವಾಸ್ ರವರು ನೀಡಿದ ದೂರನ್ನು ಸ್ವೀಕರಿಸಿ ಕಡೂರು ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ನಂ 159/2025 ಕಲಂ 103(1), 238 ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.


    ದಿನಾಂಕ:02-06-2025 ರಂದು ಕಡೂರು ಟೌನ್ ನ ಕೋಟೆ ವಾಸಿ ಶ್ರೀಮತಿ ಮೀನಾಕ್ಷಮ್ಮ ರವರು ಠಾಣೆಗೆ ಹಾಜರಾಗಿ ತನ್ನ ಗಂಡ ಸುಬ್ರಹ್ಮಣ್ಯ ರವರು ದಿನಾಂಕ:31-05-2025 ರಂದು ಕಾಣಿಯಾಗಿರುವುದಾಗಿ ತಿಳಿಸಿ ಕಡೂರು ಠಾಣಾ ಮೊ.ನಂ. 157/2025 ಕಲಂ ಮನುಷ್ಯ ಕಾಣಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.


    ಈ ಮೇಲ್ಕಂಡ ಎರಡೂ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ಡಾ. ಶ್ರೀ ವಿಕಂ ಅಮಟೆ, ಮಾನ್ಯ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ, ಶ್ರೀ ಜಯಕುಮಾರ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ, ಶ್ರೀ ಹಾಲಮೂರ್ತಿ ರಾವ್, ಮಾನ್ಯ ಪೊಲೀಸ್ ಉಪಾಧೀಕ್ಷಕರು, ತರೀಕೆರೆ ಉಪ ವಿಭಾಗ ರವರುಗಳ ಮಾರ್ಗದರ್ಶನದಲ್ಲಿ ಶ್ರೀ ರಫೀಕ್.ಎಂ. ಪೊಲೀಸ್ ವೃತ್ತ ನಿರೀಕ್ಷಕರು, ಕಡೂರು ವೃತ್ತ ರವರ ನೇತೃತ್ವದಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಾಗೂ ಕೊಲೆಮಾಡಿದ ಆರೋಪಿಗಳ ಪತ್ತೆಗಾಗಿ ಹಾಗೂ ಕಾಣೆಯಾದ ಸುಬ್ರಹ್ಮಣ್ಯ ರವರ ಪತ್ತೆ ಸಂಬಂಧ ಕಡೂರು ಪೊಲೀಸ್ ಠಾಣಾ ಪಿ ಎಸ್ ಐ ರವರುಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ 02 ಪ್ರತ್ಯೇಕ ತಂಡಗಳನ್ನು ನೇಮಕ ಮಾಡಿರುತ್ತಾರೆ. ನಂತರ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪತ್ತೆ ತಂಡಗಳು ತಾಂತ್ರಿಕ ಹಾಗೂ ವಿವಿಧ ಆಯಾಮಾಗಳಿಂದ ಪರಿಶೀಲಿಸಲಾಗಿ ಮನುಷ್ಯ ಕಾಣಿ ಪ್ರಕರಣದಲ್ಲಿ ಕಾಣೆಯಾದ ವ್ಯಕ್ತಿ ಮತ್ತು ಕೊಲೆಯಾದ ವ್ಯಕ್ತಿಯು ಒಬ್ಬನೆ ಎಂದು ಖಚಿತಪಡಿಸಿಕೊಂಡು ಪ್ರಕರಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳಾದ 1) ಪ್ರದೀಪ್ ಆಚಾರ್ ಜನ್ ಮಲ್ಲೇಶ್ ಆಚಾರ್, 33 ವರ್ಷ, ಕಾರ್ಪೆಂಟರ್ ಕೆಲಸ ವಾಸ ಪ್ಲೇಗಿನಮ್ಮ ದೇವಸ್ಥಾನದ ಹತ್ತಿರ ಕಡೂರು ಟೌನ್, 2) ಸಿದ್ದೇಶ್ ಬಿನ್ ನಂಜುಂಡಪ್ಪ, 35 ವರ್ಷ, ವಿಭೂತಿ ವ್ಯಾಪಾರ ಕೆಲಸ ವಾಸ ಕೋಟೆ ಕಡೂರು ಟೌನ್, 3) ವಿಶ್ವಾಸ್ ಬಿನ್ ಮಂಜುನಾಥ್, 18 ವರ್ಷ, ಕೂಲಿ ಕೆಲಸ ವಾಸ ಫಾರೆಸ್ಟ್ ಆಫೀಸ್ ಹತ್ತಿರ ಕಡೂರು ಟೌನ್ ರವರುಗಳನ್ನು ವಶಕ್ಕೆ ಪಡೆದು ಕೂಲಂಕುಶವಾಗಿ ವಿಚಾರಣೆಗೊಳಪಡಿಸಿದಾಗ ಪ್ರಕರಣದ ಮೊದಲನೇ ಆರೋಪಿಗೂ ಹಾಗೂ ಕೊಲೆಯಾದ ವ್ಯಕ್ತಿಯ ಹೆಂಡತಿಗೂ ಅಕ್ರಮ ಸಂಬಂಧವಿದ್ದು, ಈ ವಿಚಾರದಲ್ಲಿ ತಿಳಿದ ಕೊಲೆಯಾದ ವ್ಯಕ್ತಿಯು ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಮೊದಲನೇ ಆರೋಪಿಯು ಎರಡು ಮತ್ತು ಮೂರನೇ ಆರೋಪಿಗಳಿಗೆ ಹಣದ ಆಮೀಷವನ್ನು ಒಡ್ಡಿ ಅವರುಗಳ ಸಹಾಯ ಪಡೆದು ದಿನಾಂಕ:31-05-2025 ರಂದು ಕಂಸಾಗರ ಗೇಟ್ ಬಳಿ ಎರಡನೇ ಆರೋಪಿಯ ಮಾರುತಿ ಓಮಿನಿ ಕಾರಿನಲ್ಲಿ ಸುಬ್ರಹ್ಮಣ್ಯ ರವರನ್ನು ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ಶವವನ್ನು ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟುಹಾಕಿರುವುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ. ಸದರಿ ಪ್ರಕರಣದಲ್ಲಿ ಒಟ್ಟು 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರುಗಳಿಂದ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆಯಲಾಗಿರುತ್ತದೆ. ನಂತರ ಆರೋಪಿಗಳನ್ನು ಘನ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ ಹಾಗೂ ಪ್ರಕರಣದ ತನಿಖೆ ಮುಂದುವರೆದಿರುತ್ತದೆ.


    ಆರೋಪಿಯ ಪತ್ತೆ ತಂಡ & ತನಿಖಾ ತಂಡದಲ್ಲಿ ಶ್ರೀ ರಫೀಕ್.ಎಂ. ಪೊಲೀಸ್ ವೃತ್ತ ನಿರೀಕ್ಷಕರು, ಕಡೂರು ವೃತ್ತ ರವರ ನೇತೃತ್ವದಲ್ಲಿ ಪಿಎಸ್‌ಐ ರವರುಗಳಾದ ಶ್ರೀ ಪವನ್ ಕುಮಾರ್ ಸಿ.ಸಿ. ಶ್ರೀ ಧನಂಜಯ.ಡಿ.ಹೆಚ್, ಶ್ರೀಮತಿ ಲೀಲಾವತಿ, ಎ.ಎಸ್.ಐ ಶ್ರೀ ವೇದಮೂರ್ತಿ ಹಾಗೂ ಸಿಬ್ಬಂದಿಗಳಾದ ಶ್ರೀ ಮಧು ಕುಮಾರ್, ಹರೀಶ ಬಿ.ಸಿ. ಸ್ವಾಮಿ ಎ.ಓ, ಮಹಮ್ಮದ್ ರಿಯಾಜ್, ಧನಪಾಲ ನಾಯ್ಕ, ಪರಮೇಶ್ವರನಾಯ್ಕ ಜಿ.ಎಸ್. ಈಶ್ವರಪ್ಪ, ಬೀರೇಶ್ ಜಿ.ಕೆ. ಮಂಜುನಾಥ್ ಕೆ.ಎಸ್. ಬೀರೂರು ಪೊಲೀಸ್ ಠಾಣಾ ಅವರಾಧ ವಿಭಾಗದ ಸಿಬ್ಬಂಧಿಯವರಾದ ಹೇಮಂತ್ ಕುಮಾರ್ ಡಿ.ವಿ. ರಾಜಪ್ಪ ಬಿ.ಹೆಚ್ ಹಾಗೂ ಪ್ರಕರಣದ ತನಿಖಾ ತಂಡದಲ್ಲಿ ಶ್ರೀ ವಸಂತ್, ನಜೀರ್, ಕುಚೇಲ, ಮಂಜುನಾಥ್, ನವೀನ್ ಎ.ಆರ್ ಮತ್ತು ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ವಿಭಾಗದ ಅಬ್ದುಲ್ ರಬ್ಬಾನಿ, ನಯಾಜ್ ಅಂಜುಂ ರವರುಗಳು ಕಾರ್ಯ ನಿರ್ವಹಿಸಿದ್ದು, ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ ರವರು ಶ್ಲಾಘಿಸಿ, ಬಹುಮಾನವನ್ನು ಘೋಷಿಸಿರುತ್ತಾರೆ.

    ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

    ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

            ವಿಶ್ವ ಪರಿಸರ ದಿನದ ಅಂಗವಾಗಿ ಈ ದಿನ ದಿನಾಂಕಃ 05-06-2025 ರಂದು ಬೆಳಗ್ಗೆ  ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ ಆವರಣದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ ಮತ್ತು  ಎ. ಜಿ.ಕಾರ್ಯಪ್ಪ*   ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆ ರವರಿ

            ವಿಶ್ವ ಪರಿಸರ ದಿನದ ಅಂಗವಾಗಿ ಈ ದಿನ ದಿನಾಂಕಃ 05-06-2025 ರಂದು ಬೆಳಗ್ಗೆ  ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿ ಆವರಣದಲ್ಲಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶಿವಮೊಗ್ಗ ಜಿಲ್ಲೆ ಮತ್ತು  ಎ. ಜಿ.ಕಾರ್ಯಪ್ಪ*   ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶಿವಮೊಗ್ಗ ಜಿಲ್ಲೆ ರವರಿಂದ  ಗಿಡವನ್ನು  ನೆಡುವ ಮುಖಾಂತರ  ವಿಶ್ವ ಪರಿಸರ ದಿನವನ್ನು  ಆಚರಿಸಲಾಯಿತು.       ಈ ಸಂದರ್ಭದಲ್ಲಿ  ಶ್ರೀ ದಿಲೀಪ್ ಕುಮಾರ್* ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.          ಇದೇ ರೀತಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ,  ವೃತ್ತ ಕಛೇರಿ ಮತ್ತು ಉಪ ವಿಭಾಗ ಕಛೇರಿಗಳಲ್ಲಿ, ಆಯಾ *ಡಿಎಸ್.ಪಿ, ಸಿಪಿಐ/ಪಿಐ, ಪಿಎಸ್ಐ* ರವರುಗಳು ಮತ್ತು ಪೊಲೀಸ್ ಸಿಬ್ಬಂಧಿಗಳು ಠಾಣಾ ಮತ್ತು ಕಛೇರಿಗಳ ಆವರಣದಲ್ಲಿ *ಗಿಡಗಳನ್ನು ನಡೆವ ಮುಖಾಂತರ  ವಿಶ್ವ ಪರಿಸರ ದಿನವನ್ನು* ಆಚರಿಸಿರುತ್ತಾರೆ.*ಹಸಿರೇ ನಮ್ಮೆಲ್ಲರ ಉಸಿರು, ಕಾಡು ಬೆಳಸಿ ನಾಡು ಉಳಿಸುವ ಸಂಕಲ್ಪ ಮಾಡೋಣ*        

    ಪಿ.ಎ. ಅಂತ ಹೇಳಿಕೊಂಡು ಮೋಸ ಮಾಡುತಿದ್ದ ಆರೋಪಿ ಬಂಧನ.

    ಸಚಿವರಾದ ಶ್ರೀ ಮಧುಬಂಗಾರಪ್ಪ ನವರ ಪಿ.ಎ. ಅಂತ ಹೇಳಿಕೊಂಡು ಮೋಸ ಮಾಡುತಿದ್ದ ಆರೋಪಿ ಬಂಧನ.

    ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ

    ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ

    ಸಚಿವರಾದ ಶ್ರೀ ಮಧುಬಂಗಾರಪ್ಪ ನವರ ಪಿ.ಎ. ಅಂತ ಹೇಳಿಕೊಂಡು ಮೋಸ ಮಾಡುತಿದ್ದ ಆರೋಪಿ ಬಂಧನ.


    ಕರ್ನಾಟಕ ರಾಜ್ಯ ಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧುಬಂಗಾರಪ್ಪ


    ನವರ ಪಿ.ಎ. ಅಂತ ಹೇಳಿಕೊಂಡು ಮೋಸ ಮಾಡುತಿದ್ದ ಆರೋಪಿಯನ್ನು ಬಂಧಿಸಲಾಗಿದೆ 


    ಗಿರೀಶ ಆರ್ ಜಿಲ್ಲಾ ಯುವ ಕಾಂಗೇಸ್ ಅಧ್ಯಕ್ಷರು (ಉತ್ತರ ಬ್ಲಾಕ್) ವಾಸ ಬೊಮ್ಮನಕಟ್ಟೆ ಜಿ, ಬ್ಯಾಕ್ ಶಿವಮೊಗ್ಗ ರವರು ದಿನಾಂಕ:22/08/2025 ರಂದು ಈಗ್ಗ

    ಸಚಿವರಾದ ಶ್ರೀ ಮಧುಬಂಗಾರಪ್ಪ ನವರ ಪಿ.ಎ. ಅಂತ ಹೇಳಿಕೊಂಡು ಮೋಸ ಮಾಡುತಿದ್ದ ಆರೋಪಿ ಬಂಧನ.


    ಕರ್ನಾಟಕ ರಾಜ್ಯ ಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧುಬಂಗಾರಪ್ಪ


    ನವರ ಪಿ.ಎ. ಅಂತ ಹೇಳಿಕೊಂಡು ಮೋಸ ಮಾಡುತಿದ್ದ ಆರೋಪಿಯನ್ನು ಬಂಧಿಸಲಾಗಿದೆ 


    ಗಿರೀಶ ಆರ್ ಜಿಲ್ಲಾ ಯುವ ಕಾಂಗೇಸ್ ಅಧ್ಯಕ್ಷರು (ಉತ್ತರ ಬ್ಲಾಕ್) ವಾಸ ಬೊಮ್ಮನಕಟ್ಟೆ ಜಿ, ಬ್ಯಾಕ್ ಶಿವಮೊಗ್ಗ ರವರು ದಿನಾಂಕ:22/08/2025 ರಂದು ಈಗ್ಗೆ 06 ತಿಂಗಳಿಂದ ರಘುನಾಥ ಎಂಬ ಒಬ್ಬ ವ್ಯಕ್ತಿ ಕರ್ನಾಟಕ ರಾಜ್ಯ ಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧುಬಂಗಾರಪ್ಪ ನವರ ಪಿ.ಎ ಅಂತ ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಹಾಗೂ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿಕೊಂಡು ಜನರಿಗೆ ಮೋಸ ಮಾಡುತಿದ್ದಾನೆಂದು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತದೆ.


    ನಂತರ ಸದರಿ ಪ್ರಕರಣದಲ್ಲಿ ಆರೋಪಿ ಪತ್ತೆ ಮಾಡುವ ಬಗ್ಗೆ ಶಿವಮೊಗ್ಗ ಜಿಲ್ಲಾ, ಪೊಲೀಸ್ ಅಧೀಕ್ಷಕರಾದ ಶ್ರೀ. ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್. ರವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1 ಶ್ರೀ ಕಾರಿಯಪ್ಪ ಎ. ಜಿ. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 2 ಶ್ರೀ ಎಸ್ ರಮೇಶ್ ಕುಮಾರ್ ಮತ್ತು ಶಿವಮೊಗ್ಗ ಉಪವಿಭಾಗ-ಬಿ ಡಿ.ವೈಎಸ್.ಪಿ. ರವರಾದ ಶ್ರೀ. ಸಂಜೀವ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಜಯನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ರವರಾದ ಶ್ರೀ. ಸಿದ್ದೇಗೌಡ ಹೆಚ್.ಎಮ್, ಪಿ.ಎಸ್.ಐ-2 ರವರಾದ ಶ್ರೀಮತಿ ಕೋಮಲ ಬಿ.ಆರ್ ಎ,ಎಸ್,ಐ ಕರಿಬಸಪ್ಪ ಸಿ,ಆ‌ರ್ ರವರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ.-352 ನಾಗರಾಜ,ಕೆ, ಸಿ.ಪಿ.ಸಿ-1073 ವಸಂತ.ಜಿ, ಸಿ.ಪಿ.ಸಿ-1719 ಸಚಿನ್ ಹೆಚ್.ಎಸ್, ಸಿಪಿಸಿ-1277 ವಿರೇಶ್ ವಿ.ಎಮ್ ರವರನ್ನು ಒಳಗೊಂಡ ತಂಡವನ್ನು ರಚಿಸಿರುತ್ತದೆ.


    ಸದರಿ ತಂಡವು ದಿನಾಂಕಃ 22/08/2025 ರಂದು ಸದರಿ ಪ್ರಕರಣದ ಆರೋಪಿತರಾದ ರಘುನಾಥ ಎಸ್.ವಿ.ಎನ್, 36 ವರ್ಷ, ರಾಮಕೃಷ್ಣ ನಗರ ಮೈಸೂರು ಇವನನ್ನು ದಸ್ತಗಿರಿ ಮಾಡಿ, ಈ ದಿನ ದಿನಾಂಕ 23/08/2025 ರಂದು ಮಾನ ನ್ಯಾಯಾಲಯಕ್ಕೆ ಹಾರುಪಡಿಸಿರುತ್ತದೆ.


    ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ

    ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ

    ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ


    ಸೊರಬ: ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಸೊರಬ ಮಂಡಲ ವತಿಯಿಂದ ಹಿಂದೂಪರ ಸಂಘಟನೆಗಳು ಹಾಗೂ ಭಕ್ತಾದಿಗಳ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ಸೊರಬ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿ ಖಾಸಗ


    ಸೊರಬ: ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಘನತೆಗೆ ಧಕ್ಕೆ ಮತ್ತು ಕಳಂಕ ತರುತ್ತಿರುವವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಸೊರಬ ಮಂಡಲ ವತಿಯಿಂದ ಹಿಂದೂಪರ ಸಂಘಟನೆಗಳು ಹಾಗೂ ಭಕ್ತಾದಿಗಳ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ಸೊರಬ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು.  ಸಭೆಯನ್ನುದ್ದೇಶಿಸಿ ಬಿಜೆಪಿ ಮುಖಂಡ ಹಾಗೂ ಸಂಚಾಲಕ ಡಾಕ್ಟರ್ ಜ್ಞಾನೇಶ್ ಹೆಚ್.ಈ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪಟ್ಟಬದ್ಧ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ಸಂಘಟಿತವಾಗಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದು, ಧರ್ಮಸ್ಥಳದ ಗೌರವ ಹಾಗೂ ಘನತೆಗೆ ಧಕ್ಕೆ ತರುವಂತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುವುದರೊಂದಿಗೆ ಸಮಾಜದ ಶಾಂತಿ-ಸೌಹಾರ್ದತೆಗೂ ಧಕ್ಕೆ ತರುತ್ತಿದೆ. ಹಿಂದೂ ಪರಂಪರೆಯ ನಾವೆಲ್ಲರೂ ಸ್ವಾಭಿಮಾನಿಗಳಾಗಿದ್ದೇವೆ. ಅಂದು ಸೋಮನಾಥ, ವಿಶ್ವನಾಥ ಇಂದು ಮಂಜುನಾಥನ ಅಸ್ವಿತ್ವವನ್ನೇ ಪ್ರಶ್ನಿಸಲು ಮುಂದಾಗಿದ್ದಾರೆ. ಘಜ್ನಿ ಸಂತತಿಯವರು ಅಂದೂ, ಇಂತಹ ಸಂತತಿಗೆ ನಾವೆಲ್ಲರೂ ವಿಚಲಿತರಾಗಬೇಕಿಲ್ಲ ಎಂದರು.

    ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ರಾಜು ಎಂ ತಲ್ಲೂರು ಮಾತನಾಡಿ, ಇಂದು ನಾವು ಧರ್ಮದ ಉಳಿವಿಗಾಗಿ ಹೋರಾಟ ನಡೆಸುವ ಹೋರಾಟ ಹಿಂದೂ ವಿರೋಧಿಗಳಿಗೆ ಇದು ಎಚ್ಚರಿಕೆಯ ಘಂಟೆ. ಧರ್ಮಸ್ಥಳ ನಮಗೆ ಕಲಿಸಿದ್ದು ಧರ್ಮ, ಆಸ್ತಿಕತೆ. ಪ್ರತಿ ಭಕ್ತ ಹಸಿವನ್ನು ತೀರಿಸುವ ಕ್ಷೇತ್ರ ಧರ್ಮಸ್ಥಳ. ಇಂತಹ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅತಿದೊಡ್ಡ ಷಡ್ಯಂತ್ರವಾಗಿದೆ. ಹಿಂದೂಗಳ ವಿರುದ್ಧ ಇದೇ ರೀತಿ ಮುಂದುವರೆದರೆ ದೇಶಾದ್ಯಂತ ಹೋರಾಟ ನಡೆಸಬೇಕಾಗುತ್ತದೆ. ರಾಜ್ಯ ಸರ್ಕಾರವು ಈ ಷಡ್ಯಂತ್ರಕ್ಕೆ ಒಳಗಾಗದೇ ನಮ್ಮ ಹಿಂದುತ್ವವನ್ನು ಉಳಿಸಲು ಮುಂದಾಗಬೇಕು ಎಂದು ಎಚ್ಚರಿಸಿದರು.

    ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಮಾತನಾಡಿ ಈ ಷಡ್ಯಂತ್ರದ ಪಿತೂರಿ ಮಾಡಿರುವ ಸಮಾಜ ಘಾತುಕರ ವಿರುದ್ಧ ಹಾಗೂ ರಾಷ್ಟçವಿರೋಧಿ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ, ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಮಾತನಾಡಿದರು.

    ಪ್ರಮುಖರಾದ ದೇವೇಂದ್ರಪ್ಪ ಚನ್ನಾಪುರ, ಪ್ರಕಾಶ್ ತಲಕಾಲಕೊಪ್ಪ, ಪಾಣಿರಾಜಪ್ಪ, ವಿಜೇಂದ್ರ ತಲಗುಂದ, ಸುರೇಶ್ ಉದ್ರಿ, ಡಿ. ಶಿವಯೋಗಿ, ಉಮೇಶ್ ಉಡುಗಣಿ, ಗೀತಾ ಮಲ್ಲಿಕಾರ್ಜುನ, ಜಾನಕಪ್ಪ ಒಡೆಯರ್, ಹೊಳಿಯಮ್ಮ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಭಕ್ತಾದಿಗಳು, ಹಿಂದೂಪರ ಸಂಘಟನೆಯವರು ಪಾಲ್ಗೊಂಡಿದ್ದರು.



    ನಮ್ಮ ತಂಡ

    Our History

    Our History

    Our History

    Established in 2005, arakshakavaninews has been the go-to source for the latest news and trends in the newspaper and magazine industry. Our journey began with a small team of journalists who shared a passion for storytelling and a desire to inform and engage readers. Over the years, we have grown and expanded our team, but our commitment to delivering high-quality content has never wavered.

    Our Values

    Our History

    Our History

    At arakshakavaninews, we value integrity, accuracy, and creativity. We are committed to providing our readers with truthful and unbiased information, and we strive to be a trusted source of news and information for our community. We believe that great content is a result of hard work, dedication, and a willingness to take risks and try new things.

    Our Team

    Our History

    Our Team

    Our team is made up of talented journalists, editors, and designers who are passionate about their work. We are dedicated to delivering the best possible content to our readers, and we take pride in the quality of our work. We believe that our team is our greatest asset, and we are committed to investing in their professional development and growth.

    ನಮ್ಮ ತಂಡ

    Our Philosophy

    Sustainability Efforts

    Diversity in Media

    At arakshakavaninews, we believe in the transformative power of news. Our philosophy revolves around transparency, integrity, and the pursuit of truth.

    Diversity in Media

    Sustainability Efforts

    Diversity in Media

    We celebrate diversity at arakshakavaninews. Our newsroom is a melting pot of ideas and perspectives, ensuring a well-rounded representation of news.

    Sustainability Efforts

    Sustainability Efforts

    Sustainability Efforts

    As a responsible news organization, arakshakavaninews is committed to sustainability. We are continuously looking for ways to minimize our environmental impact.

    Behind the Pages: A Look at the People and Stories Behind the Headlines

      My Blog

      ತರೀಕೆರೆ ರಾಜ್ಯ ಮಟ್ಟದ ಜಂಗಿ ಬಯಲು ಕುಸ್ತಿ ಸ್ಪರ್ಧೆ

      ತರೀಕೆರೆ : ಪುರಸಭಾ ಸದಸ್ಯ ಲೋಕಾಯುಕ್ತ ಬಲೆಗೆ.

      ತರೀಕೆರೆ : ಪುರಸಭಾ ಸದಸ್ಯ ಲೋಕಾಯುಕ್ತ ಬಲೆಗೆ.

      ತರೀಕೆರೆ ರಾಜ್ಯಮಟ್ಟದ ಜಂಗಿ ಬಯಲು ಕುಸ್ತಿ ಸ್ಪರ್ಧೆ

      What's something exciting your business offers? Say it here.

      Close the deal

      Give customers a reason to do business with you.

      Video

      Grab interest

      Say something interesting about your business here.

      Generate excitement

      What's something exciting your business offers? Say it here.

      Video

      Grab interest

      Say something interesting about your business here.

      Generate excitement

      What's something exciting your business offers? Say it here.

      Contact Us

      What are you thinking about?

      Have a story idea for us? Would you like to write for us? 

      Send us a message and let us know what you are thinking about.

      Message us on WhatsApp

      arakshakavaninews

      Bhovi Colony, 3rd cross, Kodi camp, Tarikere taluk, Chikkamagaluru Dist., Bhovi colony/Lingadahalli main road, Tarikere, KA 577228

      +91 9880958680

      Hours

      Mon

      12:00 am – 12:00 am

      Tue

      12:00 am – 12:00 am

      Wed

      12:00 am – 12:00 am

      Thu

      12:00 am – 12:00 am

      Fri

      12:00 am – 12:00 am

      Sat

      12:00 am – 12:00 am

      Sun

      12:00 am – 12:00 am

      Social

      Subscribe

      Sign up to get each issue delivered straight to your inbox.


      Copyright © 2025 arakshakavaninews - All Rights Reserved.

      Powered by

      This website uses cookies.

      We use cookies to analyze website traffic and optimize your website experience. By accepting our use of cookies, your data will be aggregated with all other user data.

      Accept